ADVERTISEMENT

‘ಮಹಾತ್ಮ ಜ್ಯೋತಿಬಾ ಫುಲೆ’ ಕೃತಿಗೆ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ನವದೆಹಲಿ: ಕನ್ನಡಕ್ಕೆ ಅನುವಾದಗೊಂಡ ‘ಮಹಾತ್ಮ ಜ್ಯೋತಿಬಾ ಫುಲೆ’ ಕೃತಿ  ಸೇರಿದಂತೆ ವಿವಿಧ ಭಾಷೆಯ 23 ಅನುವಾದ ಕೃತಿಗಳು 2013ನೇ ಸಾಲಿನ  ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಮರಾಠಿ ಲೇಖಕ ಧನಂಜಯ್‌ ಕೀರ್‌ ಅವರು ಬರೆದಿರುವ ಜೀವನ ಚರಿತ್ರೆ­ಯನ್ನು ಜೆ.ಪಿ ದೊಡ್ಡಮನಿ ಅವರು ‘ಮಹಾತ್ಮ ಜ್ಯೋತಿಬಾ ಫುಲೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ನವದೆಹಲಿಯ ರವೀಂದ್ರನಾಥ ಭವನ­ದಲ್ಲಿ ಸೋಮವಾರ ಸಭೆ ಸೇರಿದ್ದ ವಿಶ್ವ­ನಾಥ ಪ್ರಸಾದ್‌ ತಿವಾರಿ ನೇತೃತ್ವದ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸಮಿತಿ, ವಿವಿಧ ಭಾಷೆಯ 23 ಅನು­ವಾದಿತ ಕೃತಿಗಳನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.
ಪುರಸ್ಕಾರವು 50,000 ನಗದು ಮತ್ತು ತಾಮ್ರ ಫಲಕವನ್ನು ಒಳಗೊಂಡಿದೆ.

ಆಗಸ್ಟ್‌ನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.