ADVERTISEMENT

‘ಸುಪ್ರೀಂ’ ಸ್ವತಂತ್ರ ತನಿಖಾ ತಂಡ ರಚಿಸಲಿ

ಗುಜರಾತ್‌ ಗಲಭೆಯಲ್ಲಿ ಮೋದಿ ಪಾತ್ರ: ಸಿಬಲ್‌

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಗುಜ­ರಾತ್‌ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನಿ ಅರ್ಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆ­ಸು­ವುದನ್ನು ಕಾಂಗ್ರೆಸ್‌ ಮುಂದುವರಿಸಿದೆ.

  ‘ಗುಜರಾತ್‌ ಗಲಭೆಗೆ ಸಂಬಂಧಿಸಿ­ದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕಿದ್ದ ಅಧಿ­ಕಾರ ಅತ್ಯಲ್ಪ­ವಾಗಿತ್ತು. ಆದ್ದರಿಂದ ಸುಪ್ರೀಂ­ಕೋರ್ಟ್‌ ಸ್ವತಂತ್ರ ತನಿಖಾ ತಂಡ ರಚಿಸಿ ಗಲಭೆಯ ತನಿಖೆಯನ್ನು ಅದಕ್ಕೆ ವಹಿಸಬೇಕು’ ಎಂದು ಕಾಂಗ್ರೆಸ್‌ ಪಕ್ಷದ ಮುಖಂಡ ಕಪೀಲ್‌ ಸಿಬಲ್‌ ಶನಿವಾರ ಹೇಳಿದರು.

‘ಭ್ರಷ್ಟಾಚಾರ ಪ್ರಕರಣಗಳನ್ನು ನಿರ್ವ­ಹಿ­ಸಲು ಪ್ರಾಮುಖ್ಯತೆ ನೀಡುವು­ದ­ರೊಂದಿಗೆ ಮಾನವೀಯತೆ ಜೀವಂತ­ವಾ­ಗಿಡಲು ಸುಪ್ರೀಂಕೋರ್ಟ್‌ ಸ್ವತಂತ್ರ ತನಿಖಾ ತಂಡ ರಚಿಸಿ ಗುಜರಾತ್‌ ಗಲಭೆಗೆ ಸಂಬಂ­ಧಿಸಿದ ಎಲ್ಲ ಪ್ರಕರಣ­ಗ­ಳನ್ನು ಅದಕ್ಕೆ ನೀಡಿ ಮೇಲ್ವಿಚಾರಣೆ ಮಾಡ­­­ಬೇಕು’ ಎಂದು ಅವರು ಪತ್ರಿಕಾ­ಗೋಷ್ಠಿಯಲ್ಲಿ ಹೇಳಿದರು.

‘ಗಲಭೆ ನಡೆದ ಆರು ವರ್ಷಗಳ ನಂತರ  ಎಸ್‌ಐಟಿ ರಚಿಸ­ಲಾ­ಯಿತು. ಈ ತಂಡದಲ್ಲಿದ್ದ ಪೊಲೀಸ್‌ ಅಧಿಕಾರಿಗಳ ವ್ಯಾಪ್ತಿಯಲ್ಲೇ ಗಲಭೆಗಳು ನಡೆದಿತ್ತು. ಗಲಭೆಯ ಬಗ್ಗೆ ಸಿಬಿಐನಂತೆ ತನಿಖೆ ನಡೆ­ಸುವ ಅಧಿಕಾರ ಎಸ್‌ಐಟಿಗೆ ಇಲ್ಲ. ಅದು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿ­ಕೊಳ್ಳ­ಬಹುದು ಅಷ್ಟೇ’ ಎಂದರು.

ಕಾಂಗ್ರೆಸ್‌ ನಾಯಕನಾಗಿ ಈ ಹೇಳಿಕೆ­ಗಳನ್ನು ನೀಡುತ್ತಿದ್ದೇನೆಯೇ ಹೊರತು ಸಂಸದ­ನಾಗಿ ಅಥವಾ ದೇಶದ ಕಾನೂನು ಸಚಿವನಾಗಿ ಅಲ್ಲ ಎನ್ನುವು­ದನ್ನು ಅವರು ಸ್ಪಷ್ಟಪಡಿಸಿದರು.

ಈ ವಿಷಯವನ್ನು ಮೊದಲೇ ಏಕೆ ಹೇಳಿ­­ರ­ಲಿಲ್ಲ ಎಂದು ಕೇಳಿದ ಪ್ರಶ್ನೆಗೆ ‘ಗಲಭೆ ಸಂತ್ರಸ್ತರ ಪರವಾಗಿ ನಾನು ನ್ಯಾಯಾಲಯಕ್ಕೆ ಹೋಗಿದ್ದೆ’ ಎಂದು ಉತ್ತರಿಸಿದರು.
‘ದೇಶದಲ್ಲಿ ಮೋದಿ ಪರ ಅಲೆ ಇಲ್ಲ. ಪ್ರಾದೇ­­ಶಿಕ ಪ್ರಕ್ಷಗಳೊಂದಿಗೆ ಬಿಜೆಪಿ ಕೈಜೋಡಿ­ಸುತ್ತಿರುವುದು ನೋಡಿದರೆ ಮೋದಿ ಅವರ ವೈಯಕ್ತಿಕ ವರ್ಚಸ್ಸು ಬಿಜೆಪಿಗೆ ಅಗತ್ಯವಿರುವ ಸಂಸದ ಸಂಖ್ಯೆ ತಂದು­ಕೊಡುತ್ತದೆ ಎನ್ನುವುದನ್ನು ಹೇಳ­ಲಾ­ಗದು’ ಎಂದು ಸಿಬಲ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.