ADVERTISEMENT

ಲಖನೌ: ಶೈತ್ಯಾಗಾರ ಚಾವಣಿ ಕುಸಿತು 14 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 16:08 IST
Last Updated 18 ಮಾರ್ಚ್ 2023, 16:08 IST
ಉತ್ತರ ಪ್ರದೇಶದ ಸಂಭಲ್‌ ಜಿಲ್ಲೆಯ ಚಂದೌಸಿ ಪಟ್ಟಣದಲ್ಲಿ ಶೈತ್ಯಗಾರವೊಂದರ ಚಾವಣಿ ಕುಸಿದ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡಿದ್ದರು –ಪಿಟಿಐ ಚಿತ್ರ
ಉತ್ತರ ಪ್ರದೇಶದ ಸಂಭಲ್‌ ಜಿಲ್ಲೆಯ ಚಂದೌಸಿ ಪಟ್ಟಣದಲ್ಲಿ ಶೈತ್ಯಗಾರವೊಂದರ ಚಾವಣಿ ಕುಸಿದ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡಿದ್ದರು –ಪಿಟಿಐ ಚಿತ್ರ   

ಲಖನೌ: ಉತ್ತರ ಪ್ರದೇಶದ ಸಂಭಲ್‌ ಜಿಲ್ಲೆಯ ಚಂದೌಸಿ ಪಟ್ಟಣದಲ್ಲಿರುವ ಶೈತ್ಯಾಗಾರದ ಚಾವಣಿ ಕುಸಿದ ಪರಿಣಾಮ 14 ಮಂದಿ ಮೃತಪಟ್ಟು, ಇತರ 11 ಜನರು ಗಾಯಗೊಂಡಿದ್ದಾರೆ.

ಮೃತರ ಪೈಕಿ ಬಹುತೇಕ ಜನರು ಕಾರ್ಮಿಕರಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತ ಗುರುವಾರ ಸಂಜೆಯೇ ಸಂಭವಿಸಿದ್ದರೂ, ಅವಶೇಷಗಳಡಿಯಿಂದ ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಶುಕ್ರವಾರ ರಾತ್ರಿ ಹೊರತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‍ಪ್ರಕರಣಕ್ಕೆ ಸಂಬಂಧಿಸಿ ಶೈತ್ಯಾಗಾರದ ಮಾಲೀಕರಾದ ಅಂಕುರ್‌ ಅಗರವಾಲ್‌ ಹಾಗೂ ರೋಹಿತ್‌ ಅಗರವಾಲ್‌ ಎಂಬುವವರನ್ನು ಉತ್ತರಾಖಂಡದ ಹಲ್ದವಾನಿ ಪಟ್ಟಣದಲ್ಲಿ ಶನಿವಾರ ಬಂಧಿಸಿ, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

‘25 ಜನರು ಆಲೂಗಡ್ಡೆ ಚೀಲಗಳನ್ನು ಶೈತ್ಯಾಗಾರದಲ್ಲಿ ಜೋಡಿಸಿಡುತ್ತಿದ್ದರು. ಈ ವೇಳೆ ಚಾವಣಿ ಹಠಾತ್ತನೇ ಕುಸಿಯಿತು. ಚಾವಣಿ ಅವಶೇಷಗಳಲ್ಲದೇ, ಆಲೂಗಡ್ಡೆ ಚೀಲಗಳು ಅವರ ಮೇಲೆ ಬಿದ್ದವು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.