ಇಂದೋರ್: 4 ತಿಂಗಳ ಮಗುವನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆ ಮಾಡಿದ್ದ ಅಪರಾಧಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಹೀಗಾಗಿ ಪ್ರಕರಣ ದಾಖಲಾದ ಕೇವಲ 23 ದಿನಗಳಲ್ಲೇ ತೀರ್ಪು ಹೊರಬಿದ್ದಂತಾಗಿದೆ.
ಏಪ್ರಿಲ್ 20 ರಂದು ಇಲ್ಲಿನ ರಾಜ್ವಾಡಾ ಕೋಟೆಯ ಹೊರವಲಯದಲ್ಲಿ ಹೆತ್ತವರೊಂದಿಗೆ ನಿದ್ರಿಸುತ್ತಿದ್ದ 4 ತಿಂಗಳ ಮಗುವನ್ನು ಅಪಹರಿಸಿದ್ದ ಅಪರಾಧಿ ಈ ಕೃತ್ಯವೆಸಗಿದ್ದ.
ಈ ಸಂಬಂಧ 21 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಆಗ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಇಂದೋರ್ ಪೊಲೀಸ್ ಉಪ ಮಹಾನಿರ್ದೇಶಕ ಎಚ್.ಸಿ.ಮಿಶ್ರಾ, ‘ರಾಜ್ವಾಡಾ ಪ್ರದೇಶದ ವಾಣಿಜ್ಯ ಕಟ್ಟಡವೊಂದರ ಕೆಳಮಹಡಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ತಂದೆ–ತಾಯಿ ಜೊತೆ ನಿದ್ರಿಸುತ್ತಿದ್ದ ಮಗುವನ್ನು ಅಪಹರಿಸಿ ಅತ್ಯಾಚಾರಗೈದಿದ್ದ ಸುನೀಲ್ ಭೀಲ್ ಎಂಬಾತ ಬಳಿಕ ಕೊಲೆ ಮಾಡಿದ್ದ’ ಎಂದು ಹೇಳಿದ್ದರು.
‘ಆರೋಪಿ ಹಾಗೂ ಮೃತ ಮಗುವಿನ ಪೋಷಕರು ಬಲೂನು ವ್ಯಾಪಾರಿಗಳಾಗಿದ್ದಾರೆ’ ಎಂದೂ ಮಿಶ್ರಾ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.