ಹೈದರಾಬಾದ್: ಇಲ್ಲಿನ ಪ್ರತಿಷ್ಠಿತ ಬಂಜಾರ ಹಿಲ್ಸ್ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಸಂತಾನೋತ್ಪತ್ತಿ ನೆರವು ಕೇಂದ್ರದ ಮೇಲೆ ದಾಳಿ ನಡೆಸಿದ ಪೊಲೀಸರು, 47 ಬಾಡಿಗೆ ತಾಯಂದಿರನ್ನು ರಕ್ಷಿಸಿದ್ದಾರೆ. ಇವರನ್ನು ಎರಡು ಮಹಡಿಗಳ ಕಟ್ಟಡದಲ್ಲಿ ಇರಿಸಲಾಗಿತ್ತು.
ಹೆರಿಗೆ ಆಗುವವರೆಗೆ ಗರ್ಭಿಣಿಯರಿಗೆ ಹೊರಗೆ ಹೋಗಲು ಅನುಮತಿ ಇರಲಿಲ್ಲ. ಬಾಡಿಗೆ ತಾಯಂದಿರಲ್ಲಿ ದೇಶದ ವಿವಿಧ ಭಾಗದವರಿದ್ದರು. ಮಗುವಿನ ಅಗತ್ಯವಿರುವ ದಂಪತಿಯಿಂದ ₹ 15 ರಿಂದ 30 ಲಕ್ಷ ಪಡೆಯುತ್ತಿದ್ದ ಕ್ಲಿನಿಕ್ ಮಾಲೀಕರು, ಬಾಡಿಗೆ ತಾಯಿಗೆ ₹ 2.5 ರಿಂದ ₹ 3.5 ಲಕ್ಷ ನೀಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.