ಮುಂಬೈ: ಕಮಲಾ ಮಿಲ್ ಆವರಣದ ‘1–ಅಬವ್’ ಪಬ್ನಲ್ಲಿ ಸಂಭವಿಸಿದ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ಪಬ್ನ ಇಬ್ಬರು ವ್ಯವಸ್ಥಾಪಕರನ್ನು ಎನ್ ಎಂ ಜೋಷಿ ಮಾರ್ಗ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಶುಕ್ರವಾರ 1–ಅಬವ್ ಪಬ್ನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ 14 ಮಂದಿ ಆಹುತಿಯಾಗಿದ್ದರು.
ಈ ಪ್ರಕರಣದ ಸಂಬಂಧ ಪಬ್ನ ಉದ್ಯೋಗಿಗಳಾದ ಕೆವಿನ್ ಬಾವಾ ಮತ್ತು ನೆಲ್ಸನ್ ಲೊಪೇಜ್ ಬಂಧಿಸಿರುವುದಾಗಿ ಡಿಸಿಪಿ ದೀಪಕ್ ದಿಯೊರಾಜ್ ಸ್ಪಷ್ಟಪಡಿಸಿದ್ದಾರೆ.
ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ಪಬ್ನಲ್ಲಿಯೇ ಇದ್ದ ಈ ಇಬ್ಬರು ಗ್ರಾಹಕರಿಗೆ ತುರ್ತು ದ್ವಾರದ ಮಾರ್ಗ ತೋರಿಸದೆ ಹಾಗೂ ಯಾವುದೇ ಸಹಾಯ ಮಾಡದೆ ತಪ್ಪಿಸಿಕೊಂಡಿದ್ದರು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಾಲೀಕರ ಸಂಬಂಧಿಗಳಾದ ರಾಕೇಶ್ ಸಾಂಘ್ವಿ ಮತ್ತು ಆದಿತ್ಯ ಸಾಂಘ್ವಿ ಬಂಧನವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.