ಲಖನೌ: ಕವಿ ಅನ್ವರ್ ಜಲಾಲಪುರಿ (70) ಅವರು ಮಂಗಳವಾರ ನಿಧನರಾಗಿದ್ದಾರೆ. ಭಗವದ್ಗೀತೆ ಹಾಗೂ ರವೀಂದ್ರನಾಥ ಠಾಗೋರ್ ಅವರ ಗೀತಾಂಜಲಿಯನ್ನು ಇವರು ಉರ್ದುಗೆ ಅನುವಾದ ಮಾಡಿದ್ದರು.
ಬುಧವಾರ ಅವರ ಹುಟ್ಟೂರು ಜಲಾಲ್ಪುರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
‘ಅಕ್ಬರ್ ದಿ ಗ್ರೇಟ್’ ಟಿವಿ ಧಾರಾವಾಹಿಗೆ ಅವರು ಸಂಭಾಷಣೆ ಬರೆದಿದ್ದರು. ಅವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.