ADVERTISEMENT

‘ಭಾರತ್ ಕೆ ವೀರ್’ ಗೀತೆ ಲೋಕಾರ್ಪಣೆ

ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ಕಾರ್ಯಕ್ರಮ

ಪಿಟಿಐ
Published 20 ಜನವರಿ 2018, 20:15 IST
Last Updated 20 ಜನವರಿ 2018, 20:15 IST
‘ಭಾರತ್ ಕೆ ವೀರ್’ ಉಪಕ್ರಮದ ಅಧಿಕೃತ ಗೀತೆ ರಚಿಸಿ, ಸಂಗೀತ ಸಂಯೋಜಿಸಿ ಹಾಡಿದ ಕೈಲಾಶ್ ಖೇರ್ ಅವರನ್ನು ನಟ ಅಕ್ಷಯ್ ಕುಮಾರ್ ಅವರು ನವದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿದರು –ಪಿಟಿಐ ಚಿತ್ರ
‘ಭಾರತ್ ಕೆ ವೀರ್’ ಉಪಕ್ರಮದ ಅಧಿಕೃತ ಗೀತೆ ರಚಿಸಿ, ಸಂಗೀತ ಸಂಯೋಜಿಸಿ ಹಾಡಿದ ಕೈಲಾಶ್ ಖೇರ್ ಅವರನ್ನು ನಟ ಅಕ್ಷಯ್ ಕುಮಾರ್ ಅವರು ನವದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿದರು –ಪಿಟಿಐ ಚಿತ್ರ   

ನವದೆಹಲಿ: ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಅರೆಸೇನಾ ಪಡೆ ಯೋಧರ ಕುಟುಂಬಗಳಿಗೆ ನೆರವು ನೀಡುವ ಸಲುವಾಗಿ ಮೂಲ ನಿಧಿ ಸಂಗ್ರಹಿಸಲು ಆರಂಭಿಸಿದ ‘ಭಾರತ್ ಕೆ ವೀರ್’ ಉಪಕ್ರಮದ ಅಧಿಕೃತ ಗೀತೆಯನ್ನು ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಕೈಲಾಶ್ ಖೇರ್ ಸಂಗೀತ ಸಂಯೋಜಿಸಿ, ಸಾಹಿತ್ಯ ರಚಿಸಿ ಹಾಡಿರುವ ಗೀತೆಯನ್ನು ಗೃಹ ಸಚಿವ ರಾಜನಾಥ್ ಸಿಂಗ್, ಗೃಹ ಖಾತೆ ರಾಜ್ಯ ಸಚಿವರಾದ ಕಿರಣ್ ರಿಜಿಜು ಹಾಗೂ ಹಂಸರಾಜ್ ಅಹಿರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಢೊಬಾಲ್, ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಹಾಗೂ ನಟ ಅಕ್ಷಯ್ ಕುಮಾರ್ ಅವರು ಲೋಕಾರ್ಪಣೆ ಮಾಡಿದರು.

</p><p>‘ಈ ಹಾಡನ್ನು ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಸಂಗೀತ ಪ್ರೇಮಿಗಳಲ್ಲಿ ಕೇಳಿಕೊಳ್ಳುತ್ತೇನೆ. ಅದರಿಂದ ಬಂದ ಹಣವನ್ನು ಈ ಯೋಜನೆಗೆ ನೀಡಲಾಗುತ್ತದೆ’ ಎಂದು ಕೈಲಾಶ್ ಖೇರ್ ಹೇಳಿದರು.</p><p>ಅಭಿಯಾನ ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ ಅಕ್ಷಯ್ ಕುಮಾರ್ ಅವರನ್ನು ರಾಜನಾಥ್ ಸಿಂಗ್ ಶ್ಲಾಘಿಸಿದರು. ‘ಹೋರಾಟದಲ್ಲಿ ಅಂಗವಿಕಲರಾದ ಯೋಧರಿಗೆ ನೆರವು ನೀಡಲೂ ಇಂಥದ್ದೇ ಅಭಿಯಾನ ಆರಂಭಿಸಬೇಕು’ ಎಂದು ‘ಭಾರತ್ ಕೆ ವೀರ್’ನ ರಾಯಭಾರಿ ಅಕ್ಷಯ್ ಕುಮಾರ್ ಕೇಳಿಕೊಂಡರು.</p><p>ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಯೋಧರ ಕಥೆಯನ್ನು ಹೇಳುವ ಅನುರಾಗ್ ಅಗರ್ವಾಲ್ ಅವರ ಗ್ರಾಫಿಕ್ ಕಾದಂಬರಿಯನ್ನೂ ಕಾರ್ಯಕ್ರಮದಲ್ಲಿ ಅನಾವರಣ ಮಾಡಲಾಯಿತು. ಸೈನಿಕರು ಮತ್ತು ಅವರ ಕುಟುಂಬಗಳ ಬಗೆಗೆ ಆದಿ ಪೋಚಾ ನಿರ್ದೇಶಿಸಿದ ಕಿರುಚಿತ್ರವೂ ಬಿಡುಗಡೆ ಆಯಿತು.</p><p><iframe allow="autoplay; encrypted-media" allowfullscreen="" frameborder="0" height="315" src="https://www.youtube.com/embed/GrDHTV39kHk" width="560"/></p><p>ಅಕ್ಷಯ್ ಕುಮಾರ್, ಕೈಲಾಶ್ ಖೇರ್ ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಕೊಡುಗೆ ನೀಡಿದ್ದರಿಂದಾಗಿ ಕಾರ್ಯಕ್ರಮದಲ್ಲಿಯೇ ₹ 12.93 ಕೋಟಿ ಸಂಗ್ರಹವಾಯಿತು.</p></p>

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.