ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ನೀಡಲಾಗುವ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿರುವವರ ಹೆಸರನ್ನು ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ.
ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಪಂಕಜ್ ಅಡ್ವಾಣಿ ಅವರಿಗೆ ಪದ್ಮ ಭೂಷಣ ಘೋಷಿಸಲಾಗಿದೆ. ಕರ್ನಾಟಕದ ಸೂಲಗಿತ್ತಿ ನರಸಮ್ಮ, ದೊಡ್ಡರಂಗೇ ಗೌಡ ಅವರನ್ನು ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರನ್ನು ಪದ್ಮ ವಿಭೂಣ ಪ್ರಶಸ್ತಿಗೆ ಆರಿಸಲಾಗಿದೆ.
2013ರ ‘ವಯೋಶ್ರೇಷ್ಠ ಸಮ್ಮಾನ್’ ರಾಷ್ಟ್ರೀಯ ಪ್ರಶಸ್ತಿಯೂ ಸೂಲಗಿತ್ತಿ ನರಸಮ್ಮ ಅವರನ್ನು ಅರಸಿ ಬಂದಿತ್ತು. ನರಸಮ್ಮ ಅವರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ನಿವಾಸಿಯಾಗಿದ್ದಾರೆ. ಇವರು 1,500ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ. ದೇವರಾಜು ಅರಸು ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಹೀಗೆ ಹಲವು ಪ್ರಶಸ್ತಿಗಳಿಗೆ ನರಸಮ್ಮ ಭಾಜನರಾಗಿದ್ದಾರೆ.
</p><p><strong>ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದವರು</strong></p><p>ಪಂಕಜ್ ಅಡ್ವಾಣಿ – ಪದ್ಮ ಭೂಷಣ (ಕ್ರೀಡಾ ಕ್ಷೇತ್ರ)<br/> ಸೂಲಗಿತ್ತಿ ನರಸಮ್ಮ - ಪದ್ಮ ಶ್ರೀ (ಸಮಾಜ ಸೇವೆ)<br/> ದೊಡ್ಡರಂಗೇ ಗೌಡ - ಪದ್ಮ ಶ್ರೀ (ಕಲೆ–ಸಾಹಿತ್ಯ)<br/> ಸೀತವ್ವ ಜೋದತ್ತಿ – ಪದ್ಮ ಶ್ರೀ (ಸಮಾಜ ಸೇವೆ)<br/> ಇಬ್ರಾಹಿಂ ಸುತಾರ – ಪದ್ಮ ಶ್ರೀ (ಕಲೆ–ಸಂಗೀತ)<br/> ಶ್ರೀ ಸಿದ್ದೇಶ್ವರ ಸ್ವಾಮೀಜಿ – ಪದ್ಮ ಶ್ರೀ (ಅಧ್ಯಾತ್ಮ)<br/> ಆರ್. ಸತ್ಯನಾರಾಯಣ – ಪದ್ಮ ಶ್ರೀ (ಕಲೆ–ಸಂಗೀತ)<br/> ರುದ್ರಪಟ್ನಂ ನಾರಾಯಣ ಸ್ವಾಮಿ ತಾರಾನಾಥನ್ – ಪದ್ಮ ಶ್ರೀ (ಕಲೆ–ಸಂಗೀತ)<br/> ರುದ್ರಪಟ್ನಂ ನಾರಾಯಣ ಸ್ವಾಮಿ ತ್ಯಾಗರಾಜನ್ – ಪದ್ಮ ಶ್ರೀ (ಕಲೆ–ಸಂಗೀತ)</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.