ADVERTISEMENT

ಎಐಎಡಿಎಂಕೆ: ಪಕ್ಷವಿರೋಧಿ ಚಟುವಟಿಕೆ, 144 ಮಂದಿ ಉಚ್ಚಾಟನೆ

ಪಿಟಿಐ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ಎಐಎಡಿಎಂಕೆ: ಪಕ್ಷವಿರೋಧಿ ಚಟುವಟಿಕೆ, 144 ಮಂದಿ ಉಚ್ಚಾಟನೆ
ಎಐಎಡಿಎಂಕೆ: ಪಕ್ಷವಿರೋಧಿ ಚಟುವಟಿಕೆ, 144 ಮಂದಿ ಉಚ್ಚಾಟನೆ   

ಚೆನ್ನೈ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪಕ್ಕಾಗಿ ತೂತ್ತುಕುಡಿ ಜಿಲ್ಲಾ ಘಟಕದ 144 ಮಂದಿಯನ್ನು ಎಐಎಡಿಎಂಕೆ ಶನಿವಾರ ಉಚ್ಛಾಟಿಸಿದೆ.

ಎಐಎಡಿಎಂಕೆ ಸಂಚಾಲಕ ಹಾಗೂ ಉಪಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ ಮತ್ತು ಸಹಸಂಚಾಲಕ ಮತ್ತು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ನೀಡಿರುವ ಜಂಟಿ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡು ಅಗೌರವ ತೋರಿದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಉಚ್ಚಾಟನೆ ಮಾಡಿರುವ ವ್ಯಕ್ತಿಗಳ ಜತೆ ಸಂಪರ್ಕಇಟ್ಟುಕೊಳ್ಳಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಈ ಇಬ್ಬರೂ ನಾಯಕರು ತಿಳಿಸಿದ್ದಾರೆ.

ADVERTISEMENT

ಕಳೆದ ಡಿಸೆಂಬರ್ 21ರಂದು ಆರ್‌.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪಕ್ಷದ ಬಂಡಾಯ ನಾಯಕ
ಟಿ.ಟಿ.ವಿ.ದಿನಕರನ್ ಜಯ ಗಳಿಸಿದ್ದರು. ಬಳಿಕ ದಿನಕರನ್‌ ಅವರ ಒಂಬತ್ತು ಆಪ್ತರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.