ADVERTISEMENT

ಪ್ರಧಾನಿ ಮಾತುಗಳು ಮಹತ್ವ ಕಳೆದುಕೊಳ್ಳುತ್ತಿವೆ: ರಾಹುಲ್

ನಾಗಾ ಒಪ್ಪಂದ ಏನಾಯಿತು: ಕಾಂಗ್ರೆಸ್‌ ಅಧ್ಯಕ್ಷರ ಪ್ರಶ್ನೆ

ಪಿಟಿಐ
Published 4 ಫೆಬ್ರುವರಿ 2018, 20:09 IST
Last Updated 4 ಫೆಬ್ರುವರಿ 2018, 20:09 IST
ಪ್ರಧಾನಿ ಮಾತುಗಳು ಮಹತ್ವ ಕಳೆದುಕೊಳ್ಳುತ್ತಿವೆ: ರಾಹುಲ್
ಪ್ರಧಾನಿ ಮಾತುಗಳು ಮಹತ್ವ ಕಳೆದುಕೊಳ್ಳುತ್ತಿವೆ: ರಾಹುಲ್   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಭಾರತದಲ್ಲಿ ಬಹುಶಃ ಮೊದಲ ಬಾರಿಗೆ ಪ್ರಧಾನಿ ಹುದ್ದೆಯಲ್ಲಿರುವವರ ಮಾತಿಗೆ ಬೆಲೆ ಮತ್ತು ಮಹತ್ವ ಇಲ್ಲದಂತಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭಾನುವಾರ ಲೇವಡಿ ಮಾಡಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ ಬಂಡುಕೋರರ ಹಾವಳಿಗೆ ಕಡಿವಾಣ ಹಾಕಲು ಪ್ರಧಾನಿ ಮೋದಿ 2015ರ ಆಗಸ್ಟ್‌ನಲ್ಲಿ ನಾಗಾಲ್ಯಾಂಡ್‌ ರಾಷ್ಟ್ರೀಯ ಸಮಾಜವಾದಿ ಮಂಡಳಿ ಜತೆ ‘ನಾಗಾ ಶಾಂತಿ ಒಪ್ಪಂದ’ಕ್ಕೆ ಸಹಿ ಹಾಕಿದ್ದರು.

‘ಈ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಹೊಸ ಇತಿಹಾಸ ನಿರ್ಮಿಸಿದ್ದಾಗಿ ಮೋದಿ ಬಣ್ಣಿಸಿದ್ದರು. ಆದರೆ, ಆ ನಂತರ ಒಪ್ಪಂದ ಎಲ್ಲಿದೆ. ಅದರ ಗತಿ ಏನಾಯಿತು ಎಂದು ಗೊತ್ತಿಲ್ಲ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ನಾಗಾಲ್ಯಾಂಡ್‌ನಲ್ಲಿ ಇದೇ 27ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.

ಕರ್ನಾಟಕದಲ್ಲಿ ಮರಳಿ ಅಧಿಕಾರಕ್ಕೆ–ಕಾಂಗ್ರೆಸ್‌ ವಿಶ್ವಾಸ: ಈ ವರ್ಷದಲ್ಲಿ ಒಟ್ಟು ಎಂಟು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ. ಕರ್ನಾಟಕದಲ್ಲಿ ಪುನಃ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಸುರ್ಜೇವಾಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ ರಾಜಸ್ಥಾನದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಭಾರಿಸಿದೆ. ರಾಜಸ್ಥಾನ ಫಲಿತಾಂಶ ಮುಂದೆ ನಡೆಯಲಿರುವ ಚುನಾವಣೆಗಳ ಫಲಿತಾಂಶದ ದಿಕ್ಸೂಚಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

**

ಪರ್ಯಾಯ ನಾಯಕ

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಣಸಲು ವಿರೋಧ ಪಕ್ಷಗಳು ಒಟ್ಟಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್‌ ಗಾಂಧಿ ಏಕಮಾತ್ರ ಪರ್ಯಾಯ ನಾಯಕರಾಗಲಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ.

ವಿರೋಧ ಪಕ್ಷಗಳ ಒಗ್ಗಟ್ಟು ದೇಶದ ರಾಜಕೀಯ ರಂಗದಲ್ಲಿ ಖಂಡಿತ ಬದಲಾವಣೆ ತರಲಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ದೇಶದಲ್ಲಿ ಈಗ ಇರುವುದು ಎರಡು ಮಾದರಿ. ದಿನಕ್ಕೆ ಆರು ಬಾರಿ ಉಡುಪು ಬದಲಿಸುವುದು ಮೋದಿ ಮಾದರಿ. ಸರಳತೆ, ಸ್ಪಷ್ಟತೆ ಮತ್ತು ಪಾರದರ್ಶಕತೆ ರಾಹುಲ್‌ ಮಾದರಿ’ ಎಂದು ವಿಶ್ಲೇಷಿಸಿದ್ದಾರೆ.

**

ಕರ್ನಾಟಕದಲ್ಲಿ ಮರಳಿ ಅಧಿಕಾರಕ್ಕೆ: ಕಾಂಗ್ರೆಸ್‌ ವಿಶ್ವಾಸ

ಈ ವರ್ಷದಲ್ಲಿ ಒಟ್ಟು ಎಂಟು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ. ಕರ್ನಾಟಕದಲ್ಲಿ ಪುನಃ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಸುರ್ಜೇವಾಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ ರಾಜಸ್ಥಾನದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಭಾರಿಸಿದೆ. ರಾಜಸ್ಥಾನ ಫಲಿತಾಂಶ ಮುಂದೆ ನಡೆಯಲಿರುವ ಚುನಾವಣೆಗಳ ಫಲಿತಾಂಶದ ದಿಕ್ಸೂಚಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.