ADVERTISEMENT

ಪಾಕ್‌ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ: ರಕ್ಷಣಾಪಡೆ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮ

ಪಾಕ್‌ಸೇನೆಯ ಕೆಲವು ಸ್ಥಳಗಳು ಧ್ವಂಸ

ಏಜೆನ್ಸೀಸ್
Published 5 ಫೆಬ್ರುವರಿ 2018, 6:26 IST
Last Updated 5 ಫೆಬ್ರುವರಿ 2018, 6:26 IST
ಪಾಕ್‌ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ: ರಕ್ಷಣಾಪಡೆ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮ
ಪಾಕ್‌ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ: ರಕ್ಷಣಾಪಡೆ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮ   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಸುಂದರಬನಿ ಮತ್ತು ತರಕುಂದಿ ವಲಯದ ಗಡಿ ಭದ್ರತಾ ರೇಖೆ ಬಳಿ ಪಾಕಿಸ್ತಾನ ಸೇನೆ ಭಾನುವಾರ ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿಯಲ್ಲಿ ರಕ್ಷಣಾಪಡೆ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಒಬ್ಬ ಬಿಎಸ್‌ಎಫ್ ಸಬ್‌ ಇನ್ಸ್‌ಪೆಕ್ಟರ್‌ಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹುತಾತ್ಮ ಕ್ಯಾಪ್ಟನ್‌ ಕಪಿಲ್ ಕುಂದು (23) ಹರಿಯಾಣ ಗುರುಗ್ರಾಮದ ರಂಸಿಕ ಗ್ರಾಮದವರು. ಫೆ.10ರಂದು ಅವರ ಹುಟ್ಟುಹಬ್ಬವಿತ್ತು. ಅಲ್ಲದೇ ಉಳಿದ ಹುತಾತ್ಮ ಯೋಧರನ್ನು ಹವಿಲ್ದಾರ್ ರೋಶನ್ ಲಾಲ್(42), ಸುಭಮ್ ಸಿಂಗ್(23), ರಾಮವತಾರ್ (27) ಎಂದು ತಿಳಿದು ಬಂದಿದೆ.

ADVERTISEMENT

ಪಾಕಿಸ್ತಾನ ಸೇನೆಯು ಭಾನುವಾರ ಮಧ್ಯಾಹ್ನ ಸುಮಾರು 3.30ರ ವೇಳೆ ಗುಂಡಿನ ದಾಳಿ ನಡೆಸಿತು. ಆಗ ಪ್ರತಿದಾಳಿ ನಡೆಸಿದ ಭಾರತೀಯ ಸೇನೆ ಗುಂಡಿನ ಮಳೆಗರೆದಿದೆ. ಈ ವೇಳೆ ಕ್ಯಾಪ್ಟನ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೇ ಪಾಕಿಸ್ತಾನ ಸೇನೆಯ ಕೆಲವು ಸ್ಥಳಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.