ADVERTISEMENT

ಮುಸ್ಲಿಮರಿಗೆ ಭಾರತದಲ್ಲಿರಲು ಹಕ್ಕಿಲ್ಲ: ಕಟಿಯಾರ್

ಪಿಟಿಐ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST
ಮುಸ್ಲಿಮರಿಗೆ ಭಾರತದಲ್ಲಿರಲು ಹಕ್ಕಿಲ್ಲ: ಕಟಿಯಾರ್
ಮುಸ್ಲಿಮರಿಗೆ ಭಾರತದಲ್ಲಿರಲು ಹಕ್ಕಿಲ್ಲ: ಕಟಿಯಾರ್   

ನವದೆಹಲಿ: ‘ಭಾರತದಲ್ಲಿರಲು ಮುಸ್ಲಿಮರಿಗೆ ಹಕ್ಕಿಲ್ಲ. ಅವರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ನೆಲೆಸಬೇಕು’ ಎಂದು ಬಿಜೆಪಿ ಸಂಸದ ವಿನಯ್‌ ಕಟಿಯಾರ್ ಹೇಳಿದ್ದಾರೆ.

‘ಮುಸ್ಲಿಮರು ತಮ್ಮ ಜನಸಂಖ್ಯೆಯ ಆಧಾರದ ಮೇಲೆ ದೇಶ ವಿಭಜನೆ ಮಾಡಿದ್ದಾರೆ. ಹೀಗಾಗಿ ವಿಭಜನೆಗೆ ಅವರೇ ಹೊಣೆಯಾಗಿರುವುದರಿಂದ ಅವರು ಭಾರತದಲ್ಲಿರುವ ಅಗತ್ಯವಿಲ್ಲ’ ಎಂದು ಸುದ್ದಿ ವಾಹಿನಿಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನೀಯರು ಎಂದು ಕರೆಯುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂಸದ ಅಸಾದುದ್ದೀನ್‌ ಒವೈಸಿ ಅವರು ಮಂಗಳವಾರ ಲೋಕಸಭೆಯಲ್ಲಿ ನೀಡಿರುವ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.