ADVERTISEMENT

ಮುಸ್ಲಿಂ ಕಾನೂನು ಮಂಡಳಿಯಿಂದ ಹೊರಬಂದ ನದವಿ

ಪಿಟಿಐ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಅಯೋಧ್ಯೆಯ ವಿವಾದಾತ್ಮಕ ಜಾಗದಲ್ಲಿ ರಾಮಮಂದಿರ ನಿರ್ಮಾಣದ ಪರ ಒಲವು ವ್ಯಕ್ತಪಡಿಸಿದ್ದ ಮೌಲಾನಾ ಸೈಯದ್‌ ಸಲ್ಮಾನ್‌ ಹುಸೇನ್‌ ನದವಿ ನಿರೀಕ್ಷೆಯಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ (ಎಐಎಂಪಿಎಲ್‌ಬಿ) ಹೊರಬಿದ್ದಿದ್ದಾರೆ.

‘ಮಸೀದಿ ಸ್ಥಳಾಂತರಕ್ಕೆ ಶರಿಯಾದಲ್ಲಿ ಅವಕಾಶವಿದೆ’ ಎಂದು ಎಐಎಂಪಿಎಲ್‌ಬಿ ಸಭೆಯಲ್ಲಿ ಪ್ರತಿಪಾದಿಸುವ ಮೂಲಕ ಮಂಡಳಿ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರ ಈ ನಿಲುವನ್ನು ಮಂಡಳಿ ಒಪ್ಪಿರಲಿಲ್ಲ. ಇದಕ್ಕೂ ಮೊದಲು ಅವರು ಅಯೋಧ್ಯೆ ವಿವಾದದ ಮಧ್ಯಸ್ಥಿಕೆ ವಹಿಸಿರುವ ಶ್ರೀ ಶ್ರೀ ರವಿಶಂಕರ್‌ ಅವರನ್ನು ಭೇಟಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT