ADVERTISEMENT

ಪಿಎನ್‌ಬಿ ವಂಚನೆ ಪ್ರಕರಣ: ಜಾರಿ ನಿರ್ದೇಶನಾಲಯ ಶೋಧಕಾರ್ಯ, ₹5,716 ಕೋಟಿ ಸಂಪತ್ತು ವಶ

ಏಜೆನ್ಸೀಸ್
Published 19 ಫೆಬ್ರುವರಿ 2018, 15:06 IST
Last Updated 19 ಫೆಬ್ರುವರಿ 2018, 15:06 IST
ಪಿಎನ್‌ಬಿ ವಂಚನೆ ಪ್ರಕರಣ: ಜಾರಿ ನಿರ್ದೇಶನಾಲಯ ಶೋಧಕಾರ್ಯ, ₹5,716 ಕೋಟಿ ಸಂಪತ್ತು ವಶ
ಪಿಎನ್‌ಬಿ ವಂಚನೆ ಪ್ರಕರಣ: ಜಾರಿ ನಿರ್ದೇಶನಾಲಯ ಶೋಧಕಾರ್ಯ, ₹5,716 ಕೋಟಿ ಸಂಪತ್ತು ವಶ   

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹11,400 ಕೋಟಿ ವಂಚನೆ ಮಾಡಿರುವ ಪ್ರಕರಣದ ಸಂಬಂಧ ನೀರವ್ ಮೋದಿ ಮುಂಬೈ ನಿವಾಸದ ಮೇಲೆ ಸೋಮವಾರ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ. ಈವರೆಗಿನ ಶೋಧಕಾರ್ಯದಲ್ಲಿ ₹5,716 ಕೋಟಿ ಮೌಲ್ಯದ ಸಂಪತ್ತು ವಶಪಡಿಸಿಕೊಳ್ಳಲಾಗಿದೆ.

ಐದನೇ ದಿನ ಶೋಧ ಕಾರ್ಯ ಮುಂದುವರಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವರ್ಲಿಯ ಸಮುದ್ರ ಮಹಲ್‌ ಅಪಾರ್ಟ್‌ಮೆಂಟ್‌ ಸೇರಿ ದೇಶದ 38 ನಗರಗಳಲ್ಲಿ ದಾಳಿ ನಡೆಸಿದ್ದಾರೆ. ಚಿನ್ನ, ನಗದು ಹಾಗೂ ಅತ್ಯಮೂಲ್ಯ ರತ್ನಗಳನ್ನು ಒಳಗೊಂಡಂತೆ ₹22 ಕೋಟಿ ಮೌಲ್ಯದ ಸಂಪತ್ತನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು, ಪುಣೆ, ಮುಂಬೈ, ಠಾಣೆ, ಔರಂಗಬಾದ್‌, ಕೋಲ್ಕತ್ತಾ, ದೆಹಲಿ, ಜಮ್ಮು–ಕಾಶ್ಮೀರ ಹಾಗೂ ಸೂರತ್‌ ಸೇರಿ ಇತರೆಡೆ ನೀರವ್‌ ಮೋದಿ ಮತ್ತು ಅವರ ಸಂಬಂಧಿಕರು, ಉದ್ಯಮಿಗಳ ಸ್ಥಳಗಳಲ್ಲಿ ಶೋಧಕಾರ್ಯ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.