ನವದೆಹಲಿ: 2019ರ ಲೋಕಸಭೆ ಚುನಾವಣೆಗೆ ಆಮ್ಆದ್ಮಿ ಪಕ್ಷ ಸಜ್ಜಾಗುತ್ತಿದ್ದು, ಪಂಜಾಬಿನ ಐದು ಅಭ್ಯರ್ಥಿಗಳ ಹೆಸರನ್ನು ಪಕ್ಷ ಘೋಷಿಸಿದೆ.
ಐವರು ಅಭ್ಯರ್ಥಿಗಳ ಪಟ್ಟಿಯನ್ನು ಆಪ್ ಪಕ್ಷದ ಕಚೇರಿಯು ಟ್ವಿಟರ್ನಲ್ಲಿ ಪ್ರಕಟಿಸಲಾಗಿದ್ದು, ಪಕ್ಷದ ಕೋರ್ ಸಮಿತಿಯ ಮುಖ್ಯಸ್ಥ ಬುದ್ಧರಾಮ್ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ವಿವರ ನೀಡಿದರು.
ಸಂಸದರಾದ ಭಗವಂತ್ ಮಾನ್ ಸಂಗ್ರೂರ್, ಸಾಧು ಸಿಂಗ್ ಫರೀದ್ಕೋಟ್ನಿಂದ ಸ್ಫರ್ಧೆಗಿಳಿಯಲಿದ್ದಾರೆ. ರವ್ಜೋತ್ ಸಿಂಗ್ ಅವರು ಹೋಶಿಯಾರ್ಪುರದಲ್ಲಿ ಕಣಕ್ಕಿಳಿಯಲಿದ್ದಾರೆ. ಇವರು ಈ ಹಿಂದೆ 2017ರ ವಿಧಾನಸಭಾ ಚುನಾವಣೆಯಲ್ಲಿ ಶಾಮ್ಚೌರಾಸಿಯಲ್ಲಿ ನಿಂತಿದ್ದರು.
ಇನ್ನು ಕುಲದೀಪ್ ಸಿಂಗ್ ಅಮೃತಸರದಿಂದ, ನಾರೀಂದರ್ ಸಿಂಗ್ ಶೇರ್ಗಿಲ್ ಆನಂದಪುರ ಸಹೀದ್ ಕ್ಷೇತ್ರದಲ್ಲಿ ನಿಲ್ಲಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.