ADVERTISEMENT

ಅಪಘಾತ 3 ಸಾವು: ನನ್ನ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿಲ್ಲ–ಬಿಜೆಪಿ ಶಾಸಕ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 5:26 IST
Last Updated 8 ಅಕ್ಟೋಬರ್ 2019, 5:26 IST
   

ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ನನ್ನಕಾರು ಬೈಕ್‌ಗೆ ಡಿಕ್ಕಿ ಹೊಡೆದಿಲ್ಲ ಎಂದುಬಿಜೆಪಿ ನಾಯಕಿ ಉಮಾಭಾರತಿ ಅವರ ಸೋದರಳಿಯ ಹಾಗೂ ಬಿಜೆಪಿ ಶಾಸಕ ರಾಹುಲ್ ಸಿಂಗ್ ಲೋಧಿ ತಿಳಿಸಿದ್ದಾರೆ.

ಮಧ್ಯಪ್ರದೇಶದ ತಿಕಮ್‌ಗಢ-ಚತ್ತಾರಪುರ ಮಾರ್ಗದಲ್ಲಿ ಸೋಮವಾರ ಅಪಘಾತನಡೆದಿದ್ದು ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಮೃತಪಟ್ಟಿದ್ದರು.ತಿಕಮ್‌ಗಢ ಜಿಲ್ಲೆಯ ಖರಗಾಪುರ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ರಾಹುಲ್ ಸಿಂಗ್ ಲೋಧಿ ಅವರ ಕಾರುಬೈಕ್‌ಗೆ ಡಿಕ್ಕಿಹೊಡೆದಿದೆ ಎಂದು ವರದಿಯಾಗಿತ್ತು.

ಘಟನೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವರಾಹುಲ್ ಸಿಂಗ್ ಲೋಧಿ ಈ ಅಪಘಾತಕ್ಕೂ ನನ್ನಕಾರಿಗೂ ಯಾವುದೇ ಸಂಬಂಧ ಇಲ್ಲ, ನಾನು ಸೋಮವಾರ ಇಡೀ ದಿನ ಫುತೇರ್‌ನಲ್ಲಿ ಇದ್ದೆ ಎಂದು ಹೇಳಿದ್ದಾರೆ. ನನ್ನಕಾರು ಬೈಕಿಗೆ ಗುದ್ದಿಲ್ಲ, ಎರಡು ಆಟೊಗಳು ಮತ್ತು ಬೈಕ್‌ ನಡುವೆ ಈ ಅಪಘಾತ ಸಂಭವಿಸಿದೆ ಎಂದು ನಮ್ಮ ಕಾರು ಚಾಲಕ ತಿಳಿಸಿದ್ದಾನೆ ಎಂದು ರಾಹುಲ್ ಸಿಂಗ್ ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರು ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯವರಾಗಿದ್ದು ಅವರ ಕುಟುಂಬ ವರ್ಗದವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಸಾಂತ್ವನಹೇಳುವುದಾಗಿತಿಳಿಸಿದ್ದಾರೆ.

ADVERTISEMENT

ಘಟನೆ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.