ADVERTISEMENT

ದೆಹಲಿ ಹಿಂಸಾಚಾರ ಕೇಂದ್ರ ಗುಪ್ತಚರ ದಳದ ವೈಫಲ್ಯ: ನಟ ರಜನಿಕಾಂತ್

ಪಿಟಿಐ
Published 26 ಫೆಬ್ರುವರಿ 2020, 15:24 IST
Last Updated 26 ಫೆಬ್ರುವರಿ 2020, 15:24 IST
ರಜನಿಕಾಂತ್
ರಜನಿಕಾಂತ್   

ನವದೆಹಲಿ:ದೆಹಲಿ ಹಿಂಸಾಚಾರವು ಕೇಂದ್ರ ಗುಪ್ತಚರ ದಳದ ವೈಫಲ್ಯ’ ಎಂದು ತಮಿಳುನಾಡಿನ ಖ್ಯಾತ ನಟ ರಜನಿಕಾಂತ್ ಹೇಳಿದ್ದಾರೆ.

‘ಕೇಂದ್ರ ಸರ್ಕಾರ ಗಲಭೆಯನ್ನು ನಿಯಂತ್ರಿಸಬೇಕಿತ್ತು’ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಬಳಿ ಹೇಳಿದ್ದಾರೆ.

‘ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಬಾರದು. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆಯಾದರೆ, ನಾನು ಮುಸ್ಲಿಮರ ಪರ ಇರುತ್ತೇನೆ’ ಎಂದೂ ಅವರು ಪುನರುಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.