ADVERTISEMENT

ಕೃಷಿ ಕಾನೂನುಗಳು ರೈತರಿಗೆ ನೇರ ಮಾರುಕಟ್ಟೆ ಸಂಪರ್ಕ ಕಲ್ಪಿಸುತ್ತವೆ: ನರೇಂದ್ರ ಮೋದಿ

ಪಿಟಿಐ
Published 9 ನವೆಂಬರ್ 2020, 9:59 IST
Last Updated 9 ನವೆಂಬರ್ 2020, 9:59 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ಲಖನೌ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆ ಮಾಡಲು ಅವಕಾಶ ಕಲ್ಪಿಸುತ್ತವೆ‘ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ಈ ಕೃಷಿ ಕಾನೂನುಗಳಲ್ಲಾಗಿರುವ ಸುಧಾರಣೆಗಳು ರೈತರಿಗೆ ನೇರವಾದ ಲಾಭ ನೀಡುವುದರ ಜತೆಗೆ, ಮಧ್ಯವರ್ತಿ ವ್ಯವಸ್ಥೆಯನ್ನು ಮಾರುಕಟ್ಟೆ ವ್ಯಾಪ್ತಿಯಿಂದ ಹೊರಗಿಡುತ್ತವೆ‘ ಎಂದು ಅವರು ಹೇಳಿದರು.

ವಾರಾಣಸಿಯ ವಿವಿಧ ಯೋಜನೆಗಳ ಉದ್ಘಾಟನೆ ಬಳಿಕ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಕೇಂದ್ರ ಕೈಗೊಂಡಿರುವ ಜನಪರ ಯೋಜನೆಗಳ ಬಗ್ಗೆ ವಿವರಿಸಿದರು.

ADVERTISEMENT

‘ಸ್ವಾಮಿತ್ವ ಯೋಜನೆಯಡಿ ರೈತರಿಗೆ ಆಸ್ತಿ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇದರಿಂದ ಅವರಿಗೆ ಸಾಲ ಪಡೆಯಲು ಅಷ್ಟೇ ಅಲ್ಲದೇ, ಮಾತ್ರವಲ್ಲ, ಆಸ್ತಿ ಕಳೆದುಕೊಳ್ಳುವ ಸಂಭವವೂ ಕೊನೆಯಾಗುತ್ತದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.