ADVERTISEMENT

ವಿಮಾನ ಪತನ: ಅಜಿತ್‌ ಪವಾರ್ ಗುರುತು ಪತ್ತೆಗೆ ನೆರವಾದ ಕೈಗಡಿಯಾರ

ಪಿಟಿಐ
Published 28 ಜನವರಿ 2026, 19:49 IST
Last Updated 28 ಜನವರಿ 2026, 19:49 IST
ಅಜಿತ್‌ ಪವಾರ್
ಅಜಿತ್‌ ಪವಾರ್   

ಪುಣೆ: ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ವಿಮಾನ ಪತನಗೊಂಡು ಮೃತಪಟ್ಟ ಉಪಮುಖ್ಯಮಂತ್ರಿ ಅಜಿತ್‌ ಪವಾರ್ ಅವರ ಗುರುತು ಪತ್ತೆಗೆ ಕೈಗಡಿಯಾರ ನೆರವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸುಟ್ಟು ಕರಕಲಾದ ಮೃತದೇಹವೊಂದರ ಬಳಿ ಇದ್ದ ಕೈಗಡಿಯಾರವನ್ನು ವ್ಯಕ್ತಿಯೊಬ್ಬರು ತೋರಿಸುತ್ತಿರುವ ಹಾಗೂ ಈ ಅಪಘಾತದಲ್ಲಿ ಅಜಿತ್‌ ಪವಾರ್ ಮೃತಪಟ್ಟಿದ್ದಾರೆ ಎಂಬುದಾಗಿ ಹೇಳುತ್ತಿದ್ದ ದೃಶ್ಯವಿರುವ ವಿಡಿಯೊ ವ್ಯಾಪಕವಾಗಿ ಹರಿದಾಡಿದೆ.

ಕೈಗಡಿಯಾರವು ಅಜಿತ್‌ ಪವಾರ್‌ ನೇತೃತ್ವ ವಹಿಸಿದ್ದ ಎನ್‌ಸಿಪಿಯ ಚುನಾವಣೆ ಚಿಹ್ನೆ ಎಂಬುದು ಗಮನಾರ್ಹ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.