ADVERTISEMENT

ಬೆಂಕಿಯಿಂದ ನಾಯಿ ರಕ್ಷಣೆಗೆ ಯತ್ನ: ಸೇನಾ ಅಧಿಕಾರಿ ಸಾವು

ಪಿಟಿಐ
Published 1 ಮಾರ್ಚ್ 2020, 19:54 IST
Last Updated 1 ಮಾರ್ಚ್ 2020, 19:54 IST

ಶ್ರೀನಗರ: ಜಮ್ಮು–ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್‌ಮಾರ್ಗ್‌ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ನಾಯಿಯನ್ನು ರಕ್ಷಿಸಲು ಪ್ರಯತ್ನಿಸಿದ ಸೇನಾ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಸೇನಾ ಶಿಬಿರದಲ್ಲಿ ಮೇಜರ್‌ ಅಂಕಿತ್‌ ಬುಧ್‌ರಾಜ್‌ ಅವರು ತಂಗಿದ್ದ ಟೆಂಟ್‌ಗೆ ಶನಿವಾರ ರಾತ್ರಿ ಬೆಂಕಿ ಹೊತ್ತಿಕೊಂಡಿತ್ತು. ಪತ್ನಿ ಹಾಗೂ ಒಂದು ನಾಯಿಯನ್ನು ಅವರು ರಕ್ಷಿಸಿದರು. ಮತ್ತೊಂದು ನಾಯಿಯನ್ನು ರಕ್ಷಿಸಲು ಹೋದ ಅಧಿಕಾರಿ, ಶೇ 90ರಷ್ಟು ಗಾಯಗೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳೀಯ ಪೊಲೀಸರ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.