ADVERTISEMENT

ಕೇಜ್ರಿವಾಲ್‌ ‘ಸಿಂಹ’ ಇದ್ದಂತೆ, ಯಾರಿಂದಲೂ ಮಣಿಸಲು ಸಾಧ್ಯವಿಲ್ಲ: ಸುನೀತಾ

ಪಿಟಿಐ
Published 27 ಏಪ್ರಿಲ್ 2024, 14:10 IST
Last Updated 27 ಏಪ್ರಿಲ್ 2024, 14:10 IST
ಸುನೀತಾ ಕೇಜ್ರಿವಾಲ್‌ ಅವರು ಪೂರ್ವ ದೆಹಲಿಯಲ್ಲಿ ಎಎಪಿ ಅಭ್ಯರ್ಥಿ ಪರ ಶನಿವಾರ ರೋಡ್‌ ಶೋ ನಡೆಸಿ ಮತ ಕೋರಿದರು –ಪಿಟಿಐ ಚಿತ್ರ
ಸುನೀತಾ ಕೇಜ್ರಿವಾಲ್‌ ಅವರು ಪೂರ್ವ ದೆಹಲಿಯಲ್ಲಿ ಎಎಪಿ ಅಭ್ಯರ್ಥಿ ಪರ ಶನಿವಾರ ರೋಡ್‌ ಶೋ ನಡೆಸಿ ಮತ ಕೋರಿದರು –ಪಿಟಿಐ ಚಿತ್ರ   

ನವದೆಹಲಿ: ‘ದೆಹಲಿ ಸಿ.ಎಂ ಅರವಿಂದ ಕೇಜ್ರಿವಾಲ್‌ ಅವರು ಸಿಂಹ ಇದ್ದಂತೆ, ಅವರನ್ನು ಮಣಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್‌ ಶನಿವಾರ ಹೇಳಿದರು.

ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಪರ ತಮ್ಮ ಮೊದಲ ರೋಡ್‌ ಶೋ ನಡೆಸಿದ ಅವರು, ಕೇಜ್ರಿವಾಲ್‌ ಅವರು ಶಾಲೆಗಳನ್ನು ನಿರ್ಮಿಸಿದ್ದಕ್ಕೆ, ಉಚಿತ ವಿದ್ಯುತ್‌ ನೀಡಿದ್ದಕ್ಕೆ ಮತ್ತು ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆದಿದ್ದಕ್ಕಾಗಿ ಜೈಲು ಸೇರಿದ್ದಾರೆ ಎಂದು ಹೇಳಿದರು.

‘ಸರ್ವಾಧಿಕಾರವನ್ನು ತೊಲಗಿಸಿ ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಮತಚಲಾಯಿಸಬೇಕಿದೆ’ ಎಂದು ಅವರು ಪ್ರತಿಪಾದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.