ADVERTISEMENT

ಬಾಬರಿ ಮಸೀದಿ ನೆಲಸಮ ಪ್ರಕರಣ; ಅಡ್ವಾಣಿ ಹೇಳಿಕೆ ದಾಖಲು

ಪಿಟಿಐ
Published 24 ಜುಲೈ 2020, 8:25 IST
Last Updated 24 ಜುಲೈ 2020, 8:25 IST
ಎಲ್‍.ಕೆ.ಅಡ್ವಾಣಿ
ಎಲ್‍.ಕೆ.ಅಡ್ವಾಣಿ   

ಲಖನೌ: ಬಾಬರಿ ಮಸೀದಿ ನೆಲಸಮ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಬಿಜೆಪಿ ಹಿರಿಯ ಮುಖಂಡ ಎಲ್‍.ಕೆ.ಅಡ್ವಾಣಿ ಶುಕ್ರವಾರ ಹೇಳಿಕೆ ದಾಖಲಿಸಿದರು.

ಮಾಜಿ ಉಪ ಪ್ರಧಾನಿಯೂ ಆದ92 ವರ್ಷದ ಅಡ್ವಾಣಿ ಅವರ ಹೇಳಿಕೆಯನ್ನು ವಿಡಿಯೊ ಕಾನ್ಪರೆನ್ಸ್ ಮೂಲಕವಿಶೇಷ ನ್ಯಾಯಾಧೀಶ ಎಸ್.ಕೆ.ಯಾದವ್‍ ಅವರ ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳಲಾಯಿತು.

ಗುರುವಾರವಷ್ಟೇ ನ್ಯಾಯಾಲಯವು ಮತ್ತೊಬ್ಬ ಮುಖಂಡ ಮುರಳಿ ಮನೋಹರ ಜೋಶಿ ಅವರ ಹೇಳೀಕೆಯನ್ನು ದಾಖಲಿಸಿಕೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.