ADVERTISEMENT

ಪಶ್ಚಿಮ ಬಂಗಾಳ ಸರ್ಕಾರ ಹಿಂದೂ ವಿರೋಧಿ ಧೋರಣೆ ಹೊಂದಿದೆ: ನಡ್ಡಾ

ಪಿಟಿಐ
Published 10 ಸೆಪ್ಟೆಂಬರ್ 2020, 8:22 IST
Last Updated 10 ಸೆಪ್ಟೆಂಬರ್ 2020, 8:22 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಕೋಲ್ಕತ್ತ: ‍ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವತೃಣಮೂಲ ಕಾಂಗ್ರೆಸ್‌ ಸರ್ಕಾರವು ಹಿಂದೂ ವಿರೋಧಿ ಧೋರಣೆಯನ್ನು ಹೊಂದಿದ್ದು, ಅಲ್ಪ ಸಂಖ್ಯಾತರನ್ನು ಸೆಳೆಯುವಂತಹ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದುಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ಆಡಳಿತ ಪಕ್ಷವು ರಾಜ್ಯದಲ್ಲಿ ಭ್ರಷ್ಟಚಾರವನ್ನು ಬೆಳೆಸುತ್ತಿದೆ. ಶಾಂತಿನಿಕೇತನದ ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿ ತಲೆಎತ್ತಿರುವ ಟಿಎಂಸಿ ಬೆಂಬಲಿತ ಭೂ ಮಾಫಿಯಾ ಚಟುವಟಿಕೆಯಿಂದಾಗಿ ರವೀಂದ್ರನಾಥ್‌ ಠಾಕೂರ್‌ ಅವರ ಹೆಸರಿಗೆ ಕಳಂಕ ಉಂಟಾಗುತ್ತಿದೆ ಎಂದು ಅವರು ಆರೋಪಿಸಿದರು.

ಬಿಜೆಪಿಯ ರಾಜ್ಯ ಸಮಿತಿಯನ್ನು ಹೊಸದಾಗಿ ರಚಿಸಲಾದ ಸಂದರ್ಭದಲ್ಲಿ ಅವರು ಅಂತರ್ಜಾಲ ವೇದಿಕೆ ಮೂಲಕ ಮಾತನಾಡಿದರು.

ADVERTISEMENT

ಇಡಿ ದೇಶವೇಆ.5 ರಂದು ಅಯೋಧ್ಯೆಯ ರಾಮಮಂದಿರದ ಭೂಮಿ ಪೂಜೆಯನ್ನು ವೀಕ್ಷಿಸುತ್ತಿದ್ದಾಗ, ಪಶ್ಚಿಮ ಬಂಗಾಳದ ಜನರು ಈ ಕಾರ್ಯಕ್ರಮದ ಭಾಗವಾಗದಂತೆ ತಡೆಯಲುಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಲಾಕ್‌ಡೌನ್‌ ಹೇರಿದರು. ಆದರೆ ಬಕ್ರಿದ್‌ ಸಂದರ್ಭದಲ್ಲಿ ಲಾಕ್‌ಡೌನ್‌ ಅನ್ನು ವಾಪಸು ಪಡೆಯಲಾಯಿತು ಎಂದು ನಡ್ಡಾ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.