ಝಾಲವಾಡ (ರಾಜಸ್ಥಾನ): ‘ಭಾರತ್ ಜೋಡೊ’ ಯಾತ್ರೆಯನ್ನು ಇಲ್ಲಿನ ಬಿಜೆಪಿ ಕಚೇರಿ ಕಟ್ಟಡದ ತಾರಸಿ ಮೇಲೆ ನಿಂತು ನೋಡುತ್ತಿದ್ದವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಗಾಳಿಯಲ್ಲಿ ಮುತ್ತು ತೇಲಿಬಿಟ್ಟು (ಫ್ಲೈಯಿಂಗ್ ಕಿಸ್) ಗಮನ ಸೆಳೆದರು.
ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು, ಅವರೇಕೆ‘ಜೈ ಶ್ರೀರಾಮ್’ ಮತ್ತು ‘ಹೇ ರಾಮ್’ ಎಂದು ಘೋಷಣೆ ಕೂಗುತ್ತಿಲ್ಲವೆಂದು ಪ್ರಶ್ನಿಸಿದ್ದ ರಾಹುಲ್ ಅವರು ಮರು ದಿನ ಈ ರೀತಿ ಪ್ರತಿಕ್ರಿಯಿಸಿದರು.
ಯಾತ್ರೆಯನ್ನು ಸೋಮವಾರ ರಾತ್ರಿ ಖೇಲ್ ಸಂಕುಲ್ನಲ್ಲಿ ಕೊನೆಗೊಳಿಸಲಾಗಿತ್ತು.ಬೆಳಿಗ್ಗೆ ಇಲ್ಲಿಂದಲೇ ಯಾತ್ರೆಯನ್ನು ಪುನರಾರಂಭಿಸಲಾಯಿತು. ರಾಹುಲ್ ಜತೆಗೆ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರ ಹಾಗೂ ಹಲವು ಸಚಿವರು, ಶಾಸಕರು ಯಾತ್ರೆಯಲ್ಲಿ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.