ADVERTISEMENT

ಬಟ್ಟೆ ಒಗೆಯುವ ಷರತ್ತು: ಕರ್ತವ್ಯದಿಂದ ದೂರವಿರಲು ನ್ಯಾಯಾಧೀಶರಿಗೇ ನಿರ್ದೇಶನ

ಪಿಟಿಐ
Published 25 ಸೆಪ್ಟೆಂಬರ್ 2021, 10:59 IST
Last Updated 25 ಸೆಪ್ಟೆಂಬರ್ 2021, 10:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಟ್ನಾ (ಪಿಟಿಐ): ಗ್ರಾಮದ ಎಲ್ಲ ಮಹಿಳೆಯರ ಬಟ್ಟೆಗಳನ್ನು ಒಗೆದು, ಇಸ್ತ್ರಿ ಮಾಡುವ ಷರತ್ತು ವಿಧಿಸಿ ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದ ಸ್ಥಳೀಯ ಕೋರ್ಟ್‌ನ ನ್ಯಾಯಾಧೀಶರಿಗೆ, ಮುಂದಿನ ಆದೇಶದವರೆಗೂ ಕರ್ತವ್ಯದಿಂದ ದೂರ ಉಳಿಯಬೇಕು ಎಂದು ಪಟ್ನಾ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಜಾಂಜರ್‌ಪುರ್ ಉಪವಿಭಾಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಅವಿನಾಶ್‌ ಕುಮಾರ್, ಈಚೆಗೆ ಅತ್ಯಾಚಾರ ಯತ್ನ ಆರೋಪಿಗೆ ಜಾಮೀನು ನೀಡಿದ್ದ ಆದೇಶದಿಂದಾಗಿ ಸುದ್ದಿಗೆ ಗ್ರಾಸವಾಗಿದ್ದರು.

ಕರ್ತವ್ಯದಿಂದ ದೂರವಿರಲು ಸೂಚಿಸಿ ಹೈಕೋರ್ಟ್ ಶುಕ್ರವಾರ ಆಡಳಿತಾತ್ಮಕ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ. ನ್ಯಾಯಾಧೀಶರು ಈ ಹಿಂದೆಯೂ ಭಿನ್ನ ರೀತಿಯ ಆದೇಶ ಹೊರಡಿಸಿದ್ದರು ಎನ್ನಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.