ಜಮ್ಮ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್ಚಿನ ಆಯುಷ್ಯ ಹಾಗೂ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಸೆಪ್ಟೆಂಬರ್ 14ರಿಂದ ದೇಶದಾದ್ಯಂತ ಬಿಜೆಪಿ ‘ಸೇವಾ ಸಪ್ತಾಹ’ ಆಚರಿಸಲಿದೆ ಎಂದು ಹಿರಿಯ ನಾಯಕರೊಬ್ಬರು ಶನಿವಾರ ತಿಳಿಸಿದರು.
ತ್ರಿಕೂಟ ನಗರ್ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ, ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿ ಅವಿನಾಶ್ ರೈ ಖನ್ನಾ,‘ಸೆಪ್ಟೆಂಬರ್ 17 ಮೋದಿ ಅವರ ಜನ್ಮ ದಿನಾಚರಣೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಿಂದ 20ರವರೆಗೆ ಸೇವಾ ಸಪ್ತಾಹ ಆಚರಿಸುವ ಬೃಹತ್ ನಿರ್ಧಾರವೊಂದನ್ನು ಕೈಗೊಂಡಿದ್ದೇವೆ. ದೇಶದ ಅಭಿವೃದ್ಧಿಗಾಗಿ
ಶ್ರಮಿಸುತ್ತಿರುವ ಮೋದಿ ಅವರಿಗೆ ಆಯುರಾರೋಗ್ಯಕ್ಕಾಗಿ ಈ ವೇಳೆ ಪ್ರಾರ್ಥಿಸೋಣ’ ಎಂದರು.
‘ಸೇವಾ ಸಪ್ತಾಹ ಆಚರಣೆಯ ಮೇಲುಸ್ತುವಾರಿಗಾಗಿ ಪಕ್ಷ ರಚಿಸಿರುವ ನಾಲ್ಕು ಸದಸ್ಯರ ತಂಡದಲ್ಲಿ ನಾನೂ ಇದ್ದೇನೆ. ಕಾರ್ಯಕರ್ತರೆಲ್ಲರೂ ಜತೆಗೂಡಿ ಪಕ್ಷವನ್ನು ವೃದ್ಧಿಗೊಳಿಸಬೇಕು’ ಎಂದರು. ಕಾರ್ಯಕ್ರಮದಲ್ಲಿ ವಿಕಾಸ್ ಮಂಚ್ ಸಂಘದ ಸದಸ್ಯರು ಸೇರಿದಂತೆ ಪ್ರಮುಖರು ಬಿಜೆಪಿ ಸೇರ್ಪಡೆಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.