ADVERTISEMENT

ಕಂಝಾವಾಲಾ ಅಪಘಾತ ಪ್ರಕರಣ: 800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

ಪಿಟಿಐ
Published 1 ಏಪ್ರಿಲ್ 2023, 13:56 IST
Last Updated 1 ಏಪ್ರಿಲ್ 2023, 13:56 IST
.
.   

ನವದೆಹಲಿ (ಪಿಟಿಐ): ಕಾರಿನಡಿ ಸಿಲುಕಿದ್ದ ಯುವತಿಯನ್ನು 12 ಕಿ.ಮೀ ಎಳೆದೊಯ್ದ ‘ಕಂಝಾವಾಲಾ ಅಪಘಾತ’ ಪ್ರಕರಣದ ಏಳು ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಶನಿವಾರ 800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಸುಮಾರು 117 ಸಾಕ್ಷಿಗಳ ವಿಚಾರಣೆ ಆಧಾರದಲ್ಲಿ ಈ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಅಮಿತ್‌ ಖನ್ನಾ, ಕೃಷ್ಣನ್‌, ಮಿಥುನ್‌ ಮತ್ತು ಮನೋಜ್‌ ಮಿತ್ತಲ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಉಳಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಕ್ರಿಮಿನಲ್‌ ಪಿತೂರಿ, ಸಾಕ್ಷ್ಯ ನಾಶ, ತಪ್ಪು ಮಾಹಿತಿ ನೀಡಿಕೆ ಮತ್ತಿತರ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಕರಣ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಜ.2ರಂದು ಬಂಧಿಸಲಾಗಿದೆ. ಇವರ ನ್ಯಾಯಾಂಗ ಬಂಧನ ಅವಧಿಯನ್ನು ಏ.13ರವರೆಗೆ ಕೋರ್ಟ್‌ ವಿಸ್ತರಿಸಿದೆ. ಉಳಿದ ಇಬ್ಬರು ಜಾಮೀನಿನ ಮೇಲೆ ಹೊರಗಿದ್ದಾರೆ.

ದೆಹಲಿ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ಜನವರಿ 1ರಂದು ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದಾಗಿ 20 ವರ್ಷದ ಅಂಜಲಿ ಸಿಂಗ್‌ ಮೃತಪಟ್ಟಿದ್ದರು. ಕಾರಿನಡಿ ಸಿಲುಕಿದ್ದ ಆಕೆಯ ಮೃತದೇಹವನ್ನು ಸುಮಾರು 12 ಕಿ.ಮೀ.ವರೆಗೂ ಎಳೆದೊಯ್ಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.