ಕೋಲ್ಕತ್ತ: ಕೇಂದ್ರದಲ್ಲಿ ಸರ್ಕಾರ ರಚಿಸಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ನೆರವು ಪಡೆಯುವುದಿಲ್ಲ, ಹಾಗೆಯೇ ಅವರು ಪ್ರಧಾನಿಯಾಗಲು ಬೆಂಬಲವನ್ನೂ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸೋಮೇನ್ ಮಿತ್ರಾ ಹೇಳಿದ್ದಾರೆ.
ಮಮತಾ ಅವರ ಟಿಎಂಸಿ, ಬಿಜೆಪಿ–ಆರ್ಎಸ್ಎಸ್ನ ‘ಅತ್ಯಂತ ದೊಡ್ಡ ಮತ್ತು ಅತಿ ವಿಶ್ವಾಸಾರ್ಹ ಮಿತ್ರಪಕ್ಷ’ ಎಂದು ಮಿತ್ರಾ ಆರೋಪಿಸಿದ್ದಾರೆ. ಚುನಾವಣೆಯ ಬಳಿಕ ಅಗತ್ಯ ಬಿದ್ದರೆ ಬಿಜೆಪಿಗೆ ನೆರವು ನೀಡುವುದಕ್ಕಾಗಿ ಮಮತಾ ಅವರು ಎಲ್ಲ ಆಯ್ಕೆಗಳನ್ನೂ ಮುಕ್ತವಾಗಿರಿಸಿಕೊಂಡಿದ್ದಾರೆ ಎಂದಿದ್ದಾರೆ.
ತಮ್ಮ ಬೆಂಬಲ ಇಲ್ಲದೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸುವುದು ಸಾಧ್ಯವಿಲ್ಲ ಎಂದು ಮಮತಾ ಅವರು ಹೇಳುತ್ತಲೇ ಇದ್ದಾರೆ. ಮಮತಾ ಅವರು ವಿರೋಧ ಪಕ್ಷಗಳ ಸಮಾವೇಶವೊಂದನ್ನು ಕೋಲ್ಕತ್ತದಲ್ಲಿ ಜನವರಿಯಲ್ಲಿ ಆಯೋಜಿಸಿದ್ದರು. ಅದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.