ADVERTISEMENT

ತೀವ್ರಗೊಂಡ ‘ಬಿಪೊರ್‌ಜಾಯ್’ ಚಂಡಮಾರುತ: ಭಾರತದಲ್ಲಿ ದೊಡ್ಡ ಪರಿಣಾಮ ಇಲ್ಲ– ತಜ್ಞರು

ಪಿಟಿಐ
Published 7 ಜೂನ್ 2023, 11:35 IST
Last Updated 7 ಜೂನ್ 2023, 11:35 IST
ಅರಬ್ಬಿ ಸಮುದ್ರದಲ್ಲಿ ‘ಬಿಪೊರ್‌ಜಾಯ್ ಚಂಡಮಾರುತದ ಚಲನೆಯನ್ನು ತೋರುವ ಉಪಗ್ರಹ ಸೆರೆ ಹಿಡಿದ ಚಿತ್ರವನ್ನು ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದೆ –ಪಿಟಿಐ ಚಿತ್ರ
ಅರಬ್ಬಿ ಸಮುದ್ರದಲ್ಲಿ ‘ಬಿಪೊರ್‌ಜಾಯ್ ಚಂಡಮಾರುತದ ಚಲನೆಯನ್ನು ತೋರುವ ಉಪಗ್ರಹ ಸೆರೆ ಹಿಡಿದ ಚಿತ್ರವನ್ನು ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದೆ –ಪಿಟಿಐ ಚಿತ್ರ    

ನವದೆಹಲಿ (ಪಿಟಿಐ): ‘ಬಿಪೊರ್‌ಜಾಯ್’ ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಮಂದ ಸ್ವರೂಪದ ಮುಂಗಾರು ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಬುಧವಾರ ಹೇಳಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಬೀಸುತ್ತಿರುವ ಮೊದಲ ಚಂಡಮಾರುತವಾದ ‘ಬಿಪೊರ್‌ಜಾಯ್, ಕೇರಳ ಪ್ರವೇಶಿಸಿದ ನಂತರ ತನ್ನ ತೀವ್ರತೆಯನ್ನು ಕಳೆದುಕೊಳ್ಳುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

‘ಅರಬ್ಬಿ ಸಮುದ್ರದ ಪೂರ್ವಮಧ್ಯ ಭಾಗ ಹಾಗೂ ಆಗ್ನೇಯ ದಿಕ್ಕಿನಲ್ಲಿ ಸೃಷ್ಟಿಯಾಗಿರುವ ಈ ಮಾರುತ ಗಂಟೆಗೆ 2 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದು, ಉತ್ತರ ದಿಕ್ಕಿನತ್ತ ಸಾಗುತ್ತಿದೆ. ನಂತರ, ವಾಯವ್ಯ ದಿಕ್ಕಿನತ್ತ ಸಾಗಲಿದೆ’ ಎಂದು ಮುನ್ಸೂಚನೆ ನೀಡಿದ್ದಾರೆ.

ADVERTISEMENT

ಭಾರತ, ಒಮಾನ್, ಇರಾನ್‌ ಹಾಗೂ ಪಾಕಿಸ್ತಾನದ ಮೇಲೆ ಈ ಚಂಡಮಾರುತ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.