ADVERTISEMENT

ಶಿಕ್ಷಕರ ಸೇವೆಗೆ ಉಪರಾಷ್ಟ್ರಪತಿ ಶ್ಲಾಘನೆ

ಪಿಟಿಐ
Published 5 ಸೆಪ್ಟೆಂಬರ್ 2020, 6:17 IST
Last Updated 5 ಸೆಪ್ಟೆಂಬರ್ 2020, 6:17 IST
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು   

ನವದೆಹಲಿ: ಕೋವಿಡ್‌ ಸೋಂಕು ಬಿಕ್ಕಟ್ಟಿನ ನಡುವೆಯೂ ಶೈಕ್ಷಣಿಕ ವರ್ಷಕ್ಕೆ ತೊಡಕಾಗದಂತೆ ಶ್ರಮಿಸುತ್ತಿರುವ ಎಲ್ಲ ಶಿಕ್ಷಕರಿಗೂ ಕೃತಜ್ಞತೆ ಸಲ್ಲಿಸುವ ದಿನವಿದು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಶಿಕ್ಷಣ ದಿನಾಚರಣೆ ಕುರಿತು ಹೇಳಿದ್ದಾರೆ.

ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು. ಅವರ ಸಮರ್ಪಣಾ ಮನೋಭಾವ, ಧೈರ್ಯ ಮತ್ತು ಸ್ವಾರ್ಥರಹಿತ ಸೇವೆಗಾಗಿ ಶಿಕ್ಷಕರಿಗೆ ನಮಿಸೋಣ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಮಾಜಿ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಅವರಿಗೂ ನಮನ ಸಲ್ಲಿಸಿದ್ದಾರೆ. ಅವರೊಬ್ಬ ಶ್ರೇಷ್ಠ ಶಿಕ್ಷಕ, ಚಿಂತಕ, ಮುತ್ಸದ್ಧಿ ಮತ್ತು ಲೇಖಕ. ಅವರ ಬದುಕು, ಸೇವೆ ಎಲ್ಲ ಭಾರತೀಯರಿಗೆ ಪ್ರೇರೇಪಣೆ ಆಗಲಿದೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.