ADVERTISEMENT

ಪತ್ರಕರ್ತರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಿ: ಸಂಪಾದಕರ ಕೂಟ ಆಗ್ರಹ

ಪಿಟಿಐ
Published 15 ಏಪ್ರಿಲ್ 2021, 16:43 IST
Last Updated 15 ಏಪ್ರಿಲ್ 2021, 16:43 IST
ಭಾರತೀಯ ಸಂಪಾದಕರ ಕೂಟವು (ಇಜಿಐ)
ಭಾರತೀಯ ಸಂಪಾದಕರ ಕೂಟವು (ಇಜಿಐ)   

ನವದೆಹಲಿ: ಪತ್ರಕರ್ತರವನ್ನು ಮುಂಚೂಣಿ ಕೆಲಸಗಾರರು ಎಂದು ಘೋಷಿಸಿ, ಆದ್ಯತೆ ಮೇರೆಗೆ ಕೋವಿಡ್‌–19ರ ಲಸಿಕೆ ನೀಡಬೇಕು ಎಂದು ಭಾರತೀಯ ಸಂಪಾದಕರ ಕೂಟವು (ಇಜಿಐ) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಸಾಂಕ್ರಾಮಿಕ ರೋಗ, ಚುನಾವಣೆ ಮತ್ತು ಇತರ ಪ್ರಚಲಿತ ವಿದ್ಯಮಾನಗಳ ಕುರಿತು ಸುದ್ದಿ ಸಂಸ್ಥೆಗಳು ಬಿಡುವಿಲ್ಲದೆ ಸುದ್ದಿ ಮತ್ತು ಮಾಹಿತಿಯನ್ನು ಓದುಗರಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿ ಮಾಧ್ಯಮವನ್ನು ಅಗತ್ಯ ಸೇವೆಗಳ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಪತ್ರಕರ್ತರಿಗೆ ಲಸಿಕೆ ನೀಡುವುದರ ಮೂಲಕ ರಕ್ಷಣೆಯ ಹೊದಿಕೆ ನೀಡುವುದು ನ್ಯಾಯೋಚಿತ ಎಂದು ಇಜಿಐ ಪ್ರತಿಪಾದಿಸಿದೆ.

ADVERTISEMENT

ಲಸಿಕೆಯ ರಕ್ಷಣೆ ಇಲ್ಲದೆ, ಪತ್ರಕರ್ತರು ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಎಲ್ಲ ಪತ್ರಕರ್ತರಿಗೂ (ವಯೋಮಿತಿ ಹೇರದೆ) ಲಸಿಕೆ ನೀಡಬೇಕು ಎಂದು ಕೂಟ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.