ADVERTISEMENT

ಲಂಚ ಪ್ರಕರಣ | NALCO ಮಾಜಿ ನಿರ್ದೇಶಕ ಅಭಯ್ ಕುಮಾರ್ ತಪ್ಪಿತಸ್ಥ: ದೆಹಲಿ ಕೋರ್ಟ್

ಪಿಟಿಐ
Published 21 ಜುಲೈ 2025, 14:30 IST
Last Updated 21 ಜುಲೈ 2025, 14:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ನವರತ್ನ ಕಂಪನಿಗಳಲ್ಲಿ ಒಂದಾಗಿರುವ ನ್ಯಾಷನಲ್‌ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್‌ನ (ನಾಲ್ಕೊ) ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಭಯ್ ಕುಮಾರ್ ಶ್ರಿವಾಸ್ತವ ಸೇರಿ ನಾಲ್ವರು 2010ರ ಕಲ್ಲಿದ್ದಲು ಪೂರೈಕೆ ಟೆಂಡರ್‌ಗೆ ಲಂಚ ಪ್ರಕರಣದ‌ಲ್ಲಿ ಅಪರಾಧಿಗಳು ಎಂದು ದೆಹಲಿಯ ವಿಶೇಷ ನ್ಯಾಯಾಲಯ ಸೋಮವಾರ ತೀರ್ಮಾನಿಸಿದೆ. ಅವರ ವಿರುದ್ಧ ಹಣ ಅಕ್ರಮ ವರ್ಗಾವಣೆ ಕಾನೂನಿನ ಅಡಿಯಲ್ಲಿ ಪ್ರಕರಣದ ದಾಖಲಾಗಿತ್ತು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲದ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರು ಶ್ರೀವಾಸ್ತವ, ಅವರ ಪತ್ನಿ ಚಾಂದಿನಿ ಶ್ರೀವಾಸ್ತವ, ಸ್ನೇಹಿತ ಭೂಷಣ್‌ಲಾಲ್ ಬಜಾಜ್ ಮತ್ತು ಅವರ ಪತ್ನಿ ಅನಿತಾ ಬಜಾಜ್‌ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ‘ತಪ್ಪಿತಸ್ಥರು’ ಎಂದು ಘೋಷಿಸಿದರು. ಶಿಕ್ಷೆಯ ಪ್ರಮಾಣವನ್ನು ಶೀಘ್ರದಲ್ಲೆ ಘೋಷಿಸುವ ನಿರೀಕ್ಷೆಯಿದೆ.

ADVERTISEMENT

ಪಿಎಂಎಲ್‌ ಕಾಯ್ದೆಯು ಗರಿಷ್ಠ ಏಳು ವರ್ಷಗಳವರೆಗಿನ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡುತ್ತದೆ. ಶ್ರೀವಾಸ್ತವ ಮತ್ತು ಇತರರ ವಿರುದ್ಧ ಸಿಬಿಐ 2011ರ ಫೆಬ್ರವರಿಯಲ್ಲಿ ಎಫ್‌ಐಆರ್ ದಾಖಲಿಸಿತ್ತು. ಅದರ ಆಧಾರದಲ್ಲಿ 2014ರ ಮಾರ್ಚ್‌ ವೇಳೆ ಇ.ಡಿ ಅವರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.