ADVERTISEMENT

ಜಮ್ಮು-ಕಾಶ್ಮೀರ: ಭದ್ರತಾ ಪಡೆಗಳ ಗುಂಡಿಗೆ ನಾಲ್ವರು ಉಗ್ರರು ಬಲಿ

ಏಜೆನ್ಸೀಸ್
Published 19 ನವೆಂಬರ್ 2020, 20:18 IST
Last Updated 19 ನವೆಂಬರ್ 2020, 20:18 IST
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ   

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ನಾಲ್ವರು ಉಗ್ರರು ಹತರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರೂ ಹುತಾತ್ಮರಾಗಿದ್ದಾರೆ.

ಗಡಿಯಿಂದ ಒಳನುಸುಳಿದ್ದರು ಎನ್ನಲಾದ ಉಗ್ರರನ್ನು ಒಯ್ಯುತ್ತಿದ್ದ ಲಾರಿಯನ್ನು ಜಮ್ಮು ಹೊರವಲಯದ ಟೋಲ್‌ ಬಳಿ ಭದ್ರತಾ ಪಡೆಗಳು ಅಡ್ಡಗಟ್ಟಿ ಪರಿಶೀಲಿಸುವಾಗ ಗುಂಡಿನ ಚಕಮಕಿ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಒಳನುಸುಳಿದ್ದ ಉಗ್ರರು ದೊಡ್ಡ ಪ್ರಮಾಣದ ಕೃತ್ಯ ಎಸಗಲು ಸಂಚು ನಡೆಸಿದ್ದರು ಎಂದು ಜಮ್ಮುವಿನ ಐಜಿಪಿ ಮುಕೇಶ್ ಸಿಂಗ್‌ ಹೇಳಿದರು.

ADVERTISEMENT

ಮೂರೂವರೆ ಗಂಟೆ ಗುಂಡಿನ ಚಕಮಕಿ ನಡೆದಿದೆ. ಸ್ಥಳದಿಂದ 11 ಎ.ಕೆ.ರೈಫಲ್‌ಗಳು, 3 ಪಿಸ್ತೂಲ್‌ಗಳು, 29 ಗ್ರೆನೇಡ್‌ಗಳು, 6 ಯುಬಿಜಿಎಲ್ ಗ್ರೆನೇಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.