ADVERTISEMENT

ವಂಚನೆ ಪ್ರಕರಣ: ಶಾಸಕನಿಗೆ ಸೇರಿದ ತಾಣಗಳ ಮೇಲೆ ದಾಳಿ

ಪಿಟಿಐ
Published 22 ಜನವರಿ 2021, 12:39 IST
Last Updated 22 ಜನವರಿ 2021, 12:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪಿಎಂಸಿ ಬ್ಯಾಂಕ್ ₹ 4,300 ಕೋಟಿ ವಂಚನೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಮಹಾರಾಷ್ಟ್ರ ಶಾಸಕಹಿತೇಂದ್ರ ಠಾಕೂರ್ ಅವರಿಗೆ ಸೇರಿದ ತಾಣಗಳ ಮೇಲೆ ದಾಳಿ ನಡೆಸಿದ್ದಾರೆ.

ಮುಂಬೈಗೆ ಹೊಂದಿಕೊಂಡಿರುವ ಪಾಲ್ಗರ್ ಜಿಲ್ಲೆಯಲ್ಲಿನ ವಸೈ ವಿರಾರ್ ಪ್ರದೇಶದಲ್ಲಿ, ಬಹುಜನ ವಿಕಾಸ್‌ ಅಘಡಿ (ಬಿವಿಎ) ಪಕ್ಷದ ಮುಖ್ಯಸ್ಥರೂ ಆಗಿರುವ ಶಾಸಕ ಹಿತೇಂದ್ರ ಠಾಕೂರ್ ಪ್ರವರ್ತಕರಾಗಿರುವ ವಿವಾ ಗ್ರೂಪ್‌ಗೆ ಸೇರಿದ ತಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಚ್‌ಡಿಐಎಲ್ ಕಂಪನಿಯ ಹಣದ ವಹಿವಾಟು ಮತ್ತು ವಿವಾ ಸಮೂಹಕ್ಕೆ ಸೇರಿದ ಇತರೆ ಕೆಲವರ ವಹಿವಾಟಿನ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.