ADVERTISEMENT

ನರ್ತಕ ಕ್ವೀನ್ ಹರೀಶ್‌ ಸಾವು

ಏಜೆನ್ಸೀಸ್
Published 2 ಜೂನ್ 2019, 20:00 IST
Last Updated 2 ಜೂನ್ 2019, 20:00 IST
ಕ್ವೀನ್‌ ಹರೀಶ್‌ 
ಕ್ವೀನ್‌ ಹರೀಶ್‌    

ಜೋಧಪುರ (ಪಿಟಿಐ): ರಾಜಸ್ಥಾನದ ಜೋಧಪುರದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಖ್ಯಾತ ಜಾನಪದ ನರ್ತಕ ಕ್ವೀನ್‌ ಹರೀಶ್‌ ಹಾಗೂ ಮೂವರು ಜಾನಪದ ಕಲಾವಿದರು ಮೃತಪಟ್ಟಿದ್ದಾರೆ. ಅಲ್ಲದೆ ಐವರು ಗಾಯಗೊಂಡಿದ್ದಾರೆ.

ಜೋಧಪುರ ರಾಷ್ಟ್ರೀಯ ಹೆದ್ದಾರಿ ಕಪಾರ್ದಾ ಗ್ರಾಮದಲ್ಲಿ ಈ ಅಪಘಾತ ನಡೆದಿದೆ. ಜೈಸಲ್ಮೇರ್‌ನಿಂದ ಅಜ್ಮೀರ್‌ ಕಡೆಗೆ ಇವರೆಲ್ಲ ಎಸ್‌ಯುವಿಯಲ್ಲಿ ಹೊರಟಿದ್ದರು ಎಂದು ಬಿಲಾರ ಪೊಲೀಸ್‌ ಠಾಣಾಧಿಕಾರಿ ಸೀತಾರಾಂ ಖೋಜ ಹೇಳಿದ್ದಾರೆ. ‘ಕ್ವೀನ್‌ ಹರೀಶ್ ಸಾವು ಜಾನಪದ ಕ್ಷೇತ್ರಕ್ಕೆ ದೊಡ್ಡ ನಷ್ಟ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT