ನವದೆಹಲಿ: ಭ್ರಷ್ಟಾಚಾರ ಮತ್ತು ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿದ್ದ ತೆರಿಗೆ ಇಲಾಖೆಯ 21 ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಮಂಗಳವಾರ ವಜಾಗೊಳಿಸಿದೆ.
ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಈ ಕ್ರಮಕೈಗೊಂಡಿದೆ. ಆದಾಯ ತೆರಿಗೆ ಅಧಿಕಾರಿಗಳ ಹುದ್ದೆಯಲ್ಲಿರುವ ಇವರು ‘ಗ್ರೂಪ್ ಬಿ’ ಶ್ರೇಣಿಯಲ್ಲಿದ್ದರು.
ಕಳೆದ ಜೂನ್ ತಿಂಗಳಿಂದ ಅಧಿಕಾರಿಗಳ ವಿರುದ್ಧ ಈ ರೀತಿಯ ಕ್ರಮಕೈಗೊಳ್ಳುತ್ತಿರುವುದು ಐದನೇ ಬಾರಿಯಾಗಿದೆ. ಇದುವರೆಗೆ ಹಿರಿಯ ತೆರಿಗೆ ಅಧಿಕಾರಿಗಳು ಸೇರಿದಂತೆ 85 ಅಧಿಕಾರಿಗಳನ್ನು ವಜಾ ಮಾಡಲಾಗಿದೆ.
ವಜಾಗೊಂಡವರಲ್ಲಿ ಬಹುತೇಕ ಅಧಿಕಾರಿಗಳು ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಗುಜರಾತ್ಗೆ ಸೇರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.