ADVERTISEMENT

ಸಿವಿಸಿಗೆ ಅಧ್ಯಕ್ಷ, ಆಯುಕ್ತರ ನೇಮಕ: ಪ್ರಧಾನಿಗೆ ಪ್ರಮುಖರ ಪತ್ರ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 11:40 IST
Last Updated 4 ಸೆಪ್ಟೆಂಬರ್ 2021, 11:40 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಕೇಂದ್ರ ಸರ್ಕಾರವು ಕೇಂದ್ರ ವಿಚಕ್ಷಣಾ ಆಯೋಗದ (ಸಿವಿಸಿ) ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಅದನ್ನು ಕುಂಠಿತಗೊಳಿಸಿದೆ ಎಂದು ವಿಶ್ರಾಂತ ನ್ಯಾಯಮೂರ್ತಿಗಳು, ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಸಿವಿಸಿ ಅಧ್ಯಕ್ಷರ ಸ್ಥಾನ ಈ ವರ್ಷದ ಜೂನ್‌ನಿಂದ ತೆರವಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ತೆರವಾಗಿದ್ದ ಇಬ್ಬರು ಆಯುಕ್ತರ ಸ್ಥಾನವನ್ನೂ ಭರ್ತಿ ಮಾಡಿಲ್ಲ. ಸದ್ಯ, ಆಯೋಗ ಒಬ್ಬ ಆಯುಕ್ತರ ನೇತೃತ್ವದಲ್ಲಿ ಕೆಲಸ ಮಾಡುತ್ತಿದೆ. ಕಾಯ್ದೆಯಲ್ಲಿ ಅವಕಾಶ ಇಲ್ಲದಿದ್ದರೂ ಅವರನ್ನೇ ಪ್ರಭಾರ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದಿದ್ದಾರೆ.

ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ.ಶಾ, ಪಟ್ನಾ ಹೈಕೋರ್ಟ್‌ನನಿವೃತ್ತ ನ್ಯಾಯಮೂರ್ತಿ ಅಂಜನಾ ಪ್ರಕಾಶ್, ಮಾಜಿ ಐಎಎಸ್‌ ಅಧಿಕಾರಿ ಸುಂದರ್ ಬುರ‍್ರಾ, ಮಾಜಿ ಐಪಿಎಸ್‌ ಅಧಿಕಾರಿ ಮೀರನ್‌ ಬೋರವಾಂಕರ್ ಇತರರು ಈ ಪತ್ರ ಸಹಿ ಹಾಕಿದ್ದಾರೆ.

ADVERTISEMENT

ಪತ್ರಕ್ಕೆ ಸಹಿ ಹಾಕಿರುವ ಇತರರಲ್ಲಿ ಮಾಜಿ ಮಾಹಿತಿ ಆಯುಕ್ತ ಶೈಲೇಶ್‌ ಗಾಂಧಿ, ವಕೀಲ ಪ್ರಶಾಂತ್ ಭೂಷಣ್ ಮತ್ತು ಸಾಮಾಜಿಕ ಕಾರ್ಯಕರ್ತರಾದ ಅಂಜಲಿ ಭಾರಧ್ವಾಜ್‌ ಅವರೂ ಸೇರಿದ್ದಾರೆ.

ಸಿವಿಸಿ ಅಂತಹ ಸ್ವಾಯತ್ತ ಸಂಸ್ಥೆ ಸ್ಥಾಪನೆಯ ಉದ್ದೇಶವೇ ವಿಫಲವಾಗಿದೆ. ಆಯುಕ್ತರ ಹುದ್ದೆಯನ್ನೇ ಖಾಲಿ ಉಳಿಸಿ ಅದರ ಅಧಿಕಾರವನ್ನು ಪರಿಣಾಮಕಾರಿಯಾಗಿ ಕುಂಠಿತಗೊಳಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.