ADVERTISEMENT

ಕ್ಷಮೆ ಕೋರಿದರೆ ಅಮಾನತು ಆದೇಶ ವಾಪಸಾತಿ ಪರಿಶೀಲನೆ: ರವಿಶಂಕರ್ ಪ್ರಸಾದ್

ಪಿಟಿಐ
Published 22 ಸೆಪ್ಟೆಂಬರ್ 2020, 10:03 IST
Last Updated 22 ಸೆಪ್ಟೆಂಬರ್ 2020, 10:03 IST
ಸಚಿವ ರವಿಶಂಕರ ಪ್ರಸಾದ್
ಸಚಿವ ರವಿಶಂಕರ ಪ್ರಸಾದ್   

ನವದೆಹಲಿ: ತಮ್ಮ ಅನುಚಿತ ವರ್ತನೆಗಾಗಿ ಕ್ಷಮೆ ಕೋರಿದರೆ ರಾಜ್ಯಸಭೆಯ ಎಂಟು ಸದಸ್ಯರ ಅಮಾನತು ಆದೇಶವನ್ನು ಹಿಂಪಡೆಯುವುದನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ತಿಳಿಸಿದರು.

ಅಮಾನತು ಆದೇಶವನ್ನು ರದ್ದುಪಡಿಸಲು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ವಿವಿಧ ವಿರೋಧಪಕ್ಷಗಳು ಮಂಗಳವಾರ ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಿ ಹೊರನಡೆದ ಹಿಂದೆಯೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಸಂಸತ್ತಿನ ಹೊರಗೆ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವ ರವಿಶಂಕರ ಪ್ರಸಾದ್ ಅವರು, ಸದಸ್ಯರ ಅನುಚಿತ ವರ್ತನೆಯನ್ನು ಕಾಂಗ್ರೆಸ್ ವಿರೋಧಿಸಲಿದೆ ಎಂದು ನಾವು ಭಾವಿಸಿದ್ದೆವು ಎಂದು ತಿಳಿಸಿದರು.

ADVERTISEMENT

‘ಇದೆಂಥ ರಾಜಕಾರಣ.ರಾಜ್ಯಸಭೆಯಲ್ಲಿ ಸಂಸದರೊಬ್ಬರು ಟೇಬಲ್ ಮೇಲೆ ನಿಂತು ನರ್ತಿಸುತ್ತಾ ದಾಖಲೆ ಹರಿಯುವ ಚಿತ್ರಣವನ್ನು ನಾವು ಹಿಂದೆ ಎಂದೂ ನೋಡಿರಲಿಲ್ಲ’ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.