ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ವಾಹನ ಆ್ಯಂಬುಲೆನ್ಸ್ಗೆ ದಾರಿ ಬಿಟ್ಟುಕೊಟ್ಟಿದೆ.
ಈ ಸಂಬಂಧ ಸುದ್ದಿಸಂಸ್ಥೆ ಎಎನ್ಐ ಇಂದು (ಶುಕ್ರವಾರ) ವಿಡಿಯೊ ಪೋಸ್ಟ್ ಮಾಡಿದೆ.
ಗುಜರಾತ್ನ ಅಹಮಾದಾಬಾದ್ನಿಂದ ಗಾಂಧಿನಗರಕ್ಕೆ ಪ್ರಧಾನಿ ಮೋದಿ ತೆರಳುತ್ತಿದ್ದರು.
ಹೆದ್ದಾರಿಯಲ್ಲಿ ದಾರಿ ಮಧ್ಯೆ ಆಕಸ್ಮಾತ್ ಆ್ಯಂಬುಲೆನ್ಸ್ ಆಗಮನವಾಗಿತ್ತು. ಈ ವೇಳೆ ಮೋದಿ ಬೆಂಗಾವಲು ವಾಹನ ರಸ್ತೆ ಬದಿಗೆ ಸರಿದು ಆ್ಯಂಬುಲೆನ್ಸ್ಗೆ ಹೋಗಲು ಅನುವು ಮಾಡಿಕೊಟ್ಟಿದೆ.
ಏತನ್ಮಧ್ಯೆ ಗಾಂಧಿನಗರ-ಮುಂಬೈ ವಂದೇ-ಮಾತರಂ ಹೈ ಸ್ಪೀಡ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ. ಈ ವೇಳೆ ಹೈ-ಸ್ಪೀಡ್ ರೈಲಿನಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.