ವಾರಾಣಸಿ: ಸೋಮವಾರದಿಂದ ಮೂರು ದಿನ ನಡೆಯಲಿರುವ ‘ಪ್ರವಾಸಿ ಭಾರತೀಯ ದಿನ’ಕ್ಕೆ ವಾರಾಣಸಿ ಸಜ್ಜಾಗಿದ್ದು, ಅತಿಥಿಗಳಿಗೆ ತಮ್ಮ ಮನೆಗಳಲ್ಲಿ ವಿಶೇಷ ಆತಿಥ್ಯ ನೀಡಲು ಸ್ಥಳೀಯರು ಮುಂದಾಗಿದ್ದಾರೆ.
‘ಕಾಶಿಯ ಆತಿಥ್ಯ’ ಹೆಸರಿನಡಿ ಅತಿಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸ್ಥಳೀಯರು ಸಜ್ಜಾಗಿದ್ದಾರೆ. ಐತಿಹಾಸಿಕ ನಗರಿಯ ಜನಜೀವನವನ್ನು ಅರಿಯಲು ಅನಿವಾಸಿ ಭಾರತೀಯರಿಗೆ ಈ ಮೂಲಕ ಒಂದು ಅವಕಾಶವೂ ಸಿಗಲಿದೆ.
ಹೋಟೆಲ್ಗಳ ಹೊರತಾಗಿ, ಅತಿಥಿಗಳು ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲು ಸಾವಿರಾರು ಜನರು ಮುಂದೆ ಬಂದಿದ್ದಾರೆ. ಅತಿಥಿಗಳಿಗೆ ಮನೆಯ ಆಹಾರವನ್ನೇ ಪೂರೈಸಲಾಗುತ್ತದೆ.
ಕಾರ್ಯಕ್ರಮದ ಸಿದ್ಧತೆಯನ್ನು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೇ ನಿರ್ವಹಿಸುತ್ತಿದ್ದು, ಕಾರ್ಯಕ್ರಮ ಯಶಸ್ಸಿಗಾಗಿ ಕೆಲಸ ಮಾಡುತ್ತಿದ್ದಾರೆ.
***
* 5,802ಅನಿವಾಸಿ ಭಾರತೀಯರು ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಾರೆ
* ಪ್ರಯಾಗ್ರಾಜ್ನಲ್ಲಿಜನವರಿ 24ರಂದುಅತಿಥಿಗಳು ಕುಂಭಮೇಳ ವೀಕ್ಷಿಸಲಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.