ADVERTISEMENT

ಚಂಡಮಾರುತ: ಮುಂಚಿತ ಸೂಚನೆ

ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿಗಳ ಪ್ರಯತ್ನ

ಪಿಟಿಐ
Published 13 ಜನವರಿ 2019, 20:30 IST
Last Updated 13 ಜನವರಿ 2019, 20:30 IST
ಸಾಂದರ್ಭಿಕ ಸಂಗ್ರಹ ಚಿತ್ರ
ಸಾಂದರ್ಭಿಕ ಸಂಗ್ರಹ ಚಿತ್ರ   

ನವದೆಹಲಿ: ಕನಿಷ್ಠ 6–12 ತಾಸು ಮುಂಚಿತವಾಗಿ ಚಂಡಮಾರುತ ಕುರಿತು ಮಾಹಿತಿ ನೀಡುವ ವ್ಯವಸ್ಥೆ ರೂಪಿಸಲು ಭಾರತೀಯ ಹವಾಮಾನ ಇಲಾಖೆ ತಜ್ಞರು, ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ.

ಕಳೆದ ವರ್ಷ ಮುಂಗಾರು ಆರಂಭಕ್ಕೂ ಮುನ್ನ ಬೀಸಿದ ಚಂಡಮಾರುತಗಳನ್ನು ಗ್ರಹಿಸಲು ಸಾಧ್ಯವಾಗಿರಲಿಲ್ಲ. ಅದರಿಂದ ಜಾಗೃತವಾಗಿರುವ ಇಲಾಖೆ ಸಾಕಷ್ಟು ಮುಂಚಿತವಾಗಿ ಮಾಹಿತಿ ಗ್ರಹಿಸಲು ತಯಾರಿ ನಡೆಸಿದೆ.

ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿಗಳು ಮತ್ತು ಹವಾಮಾನ ತಜ್ಞರು ಭೂವಿಜ್ಞಾನ ಸಚಿವಾಲಯದ ಇತರ ಇಲಾಖೆಗಳ ಸಹಭಾಗಿತ್ವದಲ್ಲಿ ಚಂಡಮಾರುತ ಮಾದರಿಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದಾರೆ.

ADVERTISEMENT

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೂಡ ನೆರವು ನೀಡುತ್ತಿದೆ ಎಂದು ಇಲಾಖೆ ಹೆಚ್ಚುವರಿ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

ಮುಂಗಾರು ಋತುವಿನಲ್ಲಿ ರಾಜ್ಯಗಳಿಗೆ ಹವಾಮಾನ ಬದಲಾವಣೆ ಕುರಿತು ಟ್ವಿಟರ್‌ ಮೂಲಕ ಮುನ್ನೆಚ್ಚರಿಕಾ ಸಂದೇಶ ರವಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಚಂಡಮಾರುತಕ್ಕೆ 200 ಜನರು ಬಲಿಯಾಗಿದ್ದರು. ರಾಜಸ್ಥಾನ, ಉತ್ತರ ಪ್ರದೇಶದಲ್ಲಿಯೇ 180 ಜನರು ಪ್ರಾಣ ತೆತ್ತಿದ್ದರು.

**

ಏಪ್ರಿಲ್‌ನಿಂದ ಕಾರ್ಯಾರಂಭ

ಮುಂಗಾರು ಋತು ಆರಂಭಕ್ಕೂ ಮುನ್ನ ಹವಾಮಾನ ಬದಲಾವಣೆ ಬಗ್ಗೆ ಅದರಲ್ಲೂ ವಿಶೇಷವಾಗಿ ಗುಡುಗು, ಸಿಡಿಲುಗಳಿಂದ ಕೂಡಿದ ಚಂಡಮಾರುತಗಳ ಬಗ್ಗೆ ಮುಂಚಿತವಾಗಿ ಮುನ್ಸೂಚನೆ ನೀಡುವ ವ್ಯವಸ್ಥೆ ಇದೇ ಏಪ್ರಿಲ್‌ನಿಂದ ಕಾರ್ಯಾರಂಭ ಮಾಡಲಿದೆ.

ಮಾರುತಗಳ ಚಲನವಲನಗಳನ್ನು ಸಾಕಷ್ಟು ಮುಂಚಿತವಾಗಿ ಗ್ರಹಿಸುವ ಕಾರ್ಯಾಚರಣೆ ವಿಧಾನವನ್ನು ಭಾರತೀಯ ಹವಾಮಾನ ಇಲಾಖೆ ಅಳವಡಿಸಿಕೊಂಡಿದೆ ಎಂದು ಭೂವಿಜ್ಞಾನ ಸಚಿವಾಲಯದ ರಾಜೀವನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.