ADVERTISEMENT

ಭಾರತಕ್ಕೆ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವಿದೆ: ನರೇಂದ್ರ ಮೋದಿ

ಪಿಟಿಐ
Published 28 ಜನವರಿ 2021, 10:24 IST
Last Updated 28 ಜನವರಿ 2021, 10:24 IST
ದೆಹಲಿಯಲ್ಲಿ ಗುರುವಾರ ನಡೆದ ಎನ್‌ಸಿಸಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ
ದೆಹಲಿಯಲ್ಲಿ ಗುರುವಾರ ನಡೆದ ಎನ್‌ಸಿಸಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ   

ನವದೆಹಲಿ: ಭಾರತಕ್ಕೆ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವಿದೆ. ಅದು ಕೊರೊನಾ ವೈರಸ್‌ ಸಮಸ್ಯೆಯೇ ಆಗಿರಲಿ, ಗಡಿ ಸಮಸ್ಯೆಯೇ ಆಗಿರಲಿ. ಇದನ್ನು ಭಾರತ ಕಳೆದ ವರ್ಷ ಸಾಬೀತು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದರು.

ದೆಹಲಿಯಲ್ಲಿ ರಾಷ್ಟ್ರೀಯ ಎನ್‌ಸಿಸಿ ರ‍್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ ಸ್ವದೇಶಿ ಕೋವಿಡ್‌ ಲಸಿಕೆಯನ್ನು ಸಿದ್ಧಪಡಿಸಿ ಕೋವಿಡ್‌ ವಿರುದ್ಧ ಹೋರಾಡಿದೆ. ಅಲ್ಲದೆ ಭಾರತಕ್ಕೆ ಸವಾಲೆಸೆದವರ ಆಧುನಿಕ ಕ್ಷಿಪಣಿಗಳನ್ನು ನಾಶಪಡಿಸುವ ಮೂಲಕ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಭಾರತದ ಪ್ರತಿಯೊಂದು ಕ್ಷೇತ್ರಕ್ಕೂ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಾಮರ್ಥ್ಯವಿದೆ’ ಎಂದರು.

‘ಭಾರತ ಲಸಿಕೆಯಲ್ಲಿ ‘ಆತ್ಮ ನಿರ್ಭರ್‌’ ಆಗಿದೆ. ಅದೇ ರೀತಿ ಆಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಹುರುಪು ನಮಗಿದೆ. ನಮ್ಮ ದೇಶದ ಶಸ್ತ್ರಾಸ್ತ್ರ ಪಡೆಯ ಪ್ರತಿಯೊಂದು ವಿಭಾಗವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗ ಭಾರತದ ಬಳಿ ಅತ್ಯುತ್ತಮ ಯುದ್ದೋಪಕರಣಗಳೂ ಇವೆ’ ಎಂದು ಅವರು ತಿಳಿಸಿದರು.

ADVERTISEMENT

‘ಮುಂದಿನ ದಿನಗಳಲ್ಲಿ ಕೇವಲ ದೊಡ್ಡ ಮಾರುಕಟ್ಟೆಗೆ ಮಾತ್ರವಲ್ಲದೇ ಭಾರತವು ರಕ್ಷಣಾ ಸಾಧನಗಳ ದೊಡ್ಡ ಉತ್ಪಾದಕ ಎಂಬ ಹೆಸರನ್ನು ಗಳಿಸಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.