ADVERTISEMENT

ವಾಯುಪಡೆಯ ಹುತಾತ್ಮ 13 ಯೋಧರಿಗೆ ಗೌರವ ಸಮರ್ಪಿಸಿದ ರಾಜನಾಥ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 11:50 IST
Last Updated 21 ಜೂನ್ 2019, 11:50 IST
   

ನವದೆಹಲಿ: ಎಎನ್‌–32 ವಿಮಾನ ದುರಂತದಲ್ಲಿ ಹುತಾತ್ಮರಾದ 13 ವಾಯುಪಡೆ ಯೋಧರಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಗೌರವ ಸಮರ್ಪಿಸಿದರು.

ಇಲ್ಲಿನ ಪಾಲಂ ತಾಂತ್ರಿಕ ಪ್ರದೇಶದಲ್ಲಿ ಯೋಧರ ಕುಟುಂಬದವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

‘ಎಎನ್‌–21 ವಿಮಾನ ದುರಂತದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದೆ.ಯೋಧರನ್ನು ಕಳೆದುಕೊಂಡಿದ್ದು, ದೇಶಕ್ಕೆ ಭರಿಸಲಾಗದ ನಷ್ಟವಾಗಿದೆ. ಅವರ ಕುಟುಂಬದವರನೋವಿನಲ್ಲಿ ಜೊತೆಯಾಗಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಇದೇ ಜೂನ್‌ 3ರಂದು ಅರುಣಾಚಲ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ವಿಮಾನ ಕಾಣೆಯಾಗಿತ್ತು. 11ರಂದು ದುರಂತ ಸ್ಥಳವನ್ನು ಪತ್ತೆ ಮಾಡಲಾಗಿತ್ತು. ಪ್ರತಿಕೂಲ ಹವಾಮಾನದ ಕಾರಣ ಮೃತರ ಶವಗಳನ್ನು ಸಾಗಿಸಲು ತೊಂದರೆಯಾಗಿತ್ತು. ಗುರುವಾರ ಅಸ್ಸಾಂನ ಜೊಹ್ರಾತ್‌ ವಾಯುಪಡೆ ನಿಲ್ದಾಣದ ಮೂಲಕ ದೆಹಲಿ ತರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.