ADVERTISEMENT

ಐಆರ್‌ಸಿಟಿಸಿ ಪ್ರಕರಣ: ಲಾಲೂ ವಿರುದ್ಧ ದೋಷಾರೋಪ ನಿಗದಿ: ಮುಂದೂಡಿಕೆ

ಪಿಟಿಐ
Published 23 ಜುಲೈ 2025, 13:30 IST
Last Updated 23 ಜುಲೈ 2025, 13:30 IST
ಲಾಲೂ ಪ್ರಸಾದ್‌
ಲಾಲೂ ಪ್ರಸಾದ್‌   

ನವದೆಹಲಿ: ಐಆರ್‌ಸಿಟಿಸಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್‌ ಹಾಗೂ ಅವರ ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿ ಯಾದವ್‌ ವಿರುದ್ಧ ದೋಷಾರೋಪ ನಿಗದಿ ಪ್ರಕ್ರಿಯೆಯನ್ನು ದೆಹಲಿ ನ್ಯಾಯಾಲಯ ಆಗಸ್ಟ್‌ 5ರವರೆಗೆ ಮುಂದೂಡಿದೆ.

ಮೇ 29ರಂದು ಅಂತಿಮ ವಿಚಾರಣೆ ನಡೆಸಿದ್ದ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ಸಿಬಿಐ ತಮ್ಮ ವಿರುದ್ಧ ಹೊರಿಸಿರುವ ಭ್ರಷ್ಟಾಚಾರದ ಆರೋಪವನ್ನು ಲಾಲೂ, ರಾಬ್ರಿ ದೇವಿ ಹಾಗೂ ತೇಜಸ್ವಿ ಅವರು ನಿರಾಕರಿಸಿದ್ದಾರೆ.

ADVERTISEMENT

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಪ್ರಬಲ ಪುರಾವೆಗಳಿವೆ ಎಂದು ಸಿಬಿಐ ಫೆಬ್ರುವರಿ 28ರಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.