ADVERTISEMENT

ಆಫ್ಗನ್‌ ಪರಿಸ್ಥಿತಿ–ದುಶಾಂಬೆ ಸಭೆಯಲ್ಲಿ ಸಚಿವ ಜೈಶಂಕರ್ ಭಾಗಿ

ಪಿಟಿಐ
Published 14 ಜುಲೈ 2021, 8:25 IST
Last Updated 14 ಜುಲೈ 2021, 8:25 IST
ಎಸ್.ಜೈಶಂಕರ್‌
ಎಸ್.ಜೈಶಂಕರ್‌   

ನವದೆಹಲಿ: ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲು ಶಾಂಘೈ ಸಹಕಾರ ಸಂಘಟನೆಗೆ (ಎಸ್‌ಸಿಒ) ಸೇರಿದ ಭಾರತ, ಚೀನಾ, ಪಾಕಿಸ್ತಾನ ಮತ್ತು ಇತರ ಐದು ರಾಷ್ಟ್ರಗಳು ದುಶಾಂಬೆಯಲ್ಲಿ ಬುಧವಾರ ಸಭೆ ಸೇರಿದ್ದು, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಇದರಲ್ಲಿ ಪಾಲ್ಗೊಂಡಿದ್ದಾರೆ.

‘ಎಸ್‌ಸಿಒ ಸಂಘಟನೆಗೆ ಇದೀಗ 20 ವರ್ಷ ತುಂಬಿದೆ. ಅಫ್ಗಾನಿಸ್ತಾನ ಮತ್ತು ಕೋವಿಡ್‌ ನಂತರದ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲು ಉತ್ತಮ ವೇದಿಕೆ ದೊರೆತಿದೆ‍’ ಎಂದು ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ.

ಸಭೆಯಲ್ಲಿ ರಷ್ಯಾದ ವಿದೇಶಾಂಗ ಸಚಿವ ಸರ್ಗೈ ಲವರೋವ್, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮ್ಮದ್ ಖುರೇಶಿ ಅವರೂ ಪಾಲ್ಗೊಳ್ಳುತ್ತಿದ್ದಾರೆ.

ADVERTISEMENT

ಎಸ್‌ಸಿಒ ಸಂಘಟನೆಯುನ್ಯಾಟೊಗೆ ಪ್ರತಿಯಾಗಿ ಸ್ಥಾಪನೆಯಾದ ಸಂಘಟನೆ ಎಂದು ಬಿಂಬಿಸಲಾಗುತ್ತಿದೆ. 2017ರಿಂದೀಚೆಗೆ ಭಾರತ ಮತ್ತು ಪಾಕಿಸ್ತಾನಗಳು ಈ ಸಂಘಟನೆಯ ಕಾಯಂ ಸದಸ್ಯ ರಾಷ್ಟ್ರಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.