ADVERTISEMENT

‘ಜೆಎನ್‌ಯು ಕುಲಪತಿ ಇನ್ಮುಂದೆ ಕುಲಗುರು’

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 19:57 IST
Last Updated 22 ಆಗಸ್ಟ್ 2022, 19:57 IST
   

ನವದೆಹಲಿ:ಜೆಎನ್‌ಯು ಕುಲಪತಿಯ ಉಲ್ಲೇಖವನ್ನು ಕುಲಪತಿ ಬದಲು ‘ಕುಲಗುರು’ ಎಂದು ಬದಲಾಯಿಸಬಹುದು ಎಂದು ಜೆಎನ್‌ಯು ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಸೋಮವಾರ ಹೇಳಿದ್ದಾರೆ.‌

ಡಾ. ಬಿ.ಆರ್. ಅಂಬೇಡ್ಕರ್ ಉಪನ್ಯಾಸ ಸರಣಿಯಲ್ಲಿ ಮಾತನಾಡಿದ ಅವರು, ಕುಲಗುರು ಎಂದು ಬದಲಾ ಯಿಸುವ ಮೂಲಕ ‘ಲಿಂಗ ತಟಸ್ಥತೆ’ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಸೆ.14 ರಂದು ನಡೆಯುವ ಕಾರ್ಯಕಾರಿ ಮಂಡಳಿಯಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ. ಕುಲಪತಿಯನ್ನು ಕುಲಗುರು ಎಂದು ಬದಲಾಯಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT