ADVERTISEMENT

ಕಪಿಲಾ ವಾತ್ಸಾಯನ್ ನಿಧನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 18:39 IST
Last Updated 16 ಸೆಪ್ಟೆಂಬರ್ 2020, 18:39 IST
ಮನಮೋಹನ್‌ ಸಿಂಗ್‌ ಜೊತೆ ಕಪಿಲಾ
ಮನಮೋಹನ್‌ ಸಿಂಗ್‌ ಜೊತೆ ಕಪಿಲಾ   

ನವದೆಹಲಿ (ಪಿಟಿಐ): ಲೇಖಕಿ, ಚಿಂತಕಿ, ರಾಜ್ಯಸಭೆಯ ಮಾಜಿ ಸದಸ್ಯೆ ಕಪಿಲಾ ವಾತ್ಸಾಯನ್ ಅವರು ಬುಧವಾರ ಇಲ್ಲಿ ತಮ್ಮ ನಿವಾಸದಲ್ಲಿ ಮೃತರಾದರು. ಅವರಿಗೆ 92 ವರ್ಷವಾಗಿತ್ತು. ಮಧ್ಯಾಹ್ನ ಲೋಧಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.

2011ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದರು. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಸ್ಥಾಪಕ ನಿರ್ದೇಶಕಿ, ಐಐಸಿಯಲ್ಲಿ ಏಷ್ಯಾ ಪ್ರಾಜೆಕ್ಟ್‌ನ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದರು. ‘ದ ಸ್ವೈರ್ ಅಂಡ್ ದ ಸರ್ಕಲ್ ಆಫ್ ಇಂಡಿಯನ್ ಆರ್ಟ್ಸ್’ ಸೇರಿ ಹಲವು ಕೃತಿಗಳನ್ನು ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT