ADVERTISEMENT

ಆತ್ಮಾಹುತಿ ದಾಳಿಗೆ ಸಂಚು: ಉಗ್ರ ಬಂಧನ

ಪಿಟಿಐ
Published 21 ಆಗಸ್ಟ್ 2022, 16:02 IST
Last Updated 21 ಆಗಸ್ಟ್ 2022, 16:02 IST

ಜಮ್ಮು (ಪಿಟಿಐ): ‘ಲಷ್ಕರ್‌ ಎ–ತಯಬಾದ (ಎಲ್‌ಇಟಿ) ಮಾರ್ಗದರ್ಶಕ ಹಾಗೂ ಪಾಕಿಸ್ತಾನದ ಸೇನೆಯ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದ್ದ ಉಗ್ರನನ್ನು ಭಾರತೀಯ ಸೇನೆಯು ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಾನುವಾರ ಗುಂಡು ಹೊಡೆದು ಬಂಧಿಸಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ತಬರಕ್‌ ಹುಸೇನ್‌ (32) ಬಂಧಿತ. ಈತ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT