ADVERTISEMENT

ಬಂಗಲೆ ತೆರವುಗೊಳಿಸದ ಮಾಜಿ ಸಂಸದರು: ನೀರು, ವಿದ್ಯುತ್‌ ಕಡಿತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 19:00 IST
Last Updated 15 ಅಕ್ಟೋಬರ್ 2019, 19:00 IST

ನವದೆಹಲಿ: ಸರ್ಕಾರಿ ಬಂಗಲೆಗಳಲ್ಲಿ ಅವಧಿ ಮೀರಿ ವಾಸಿಸುತ್ತಿರುವ ಮಾಜಿ ಸಂಸದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು ಅವರ ನಿವಾಸಗಳಿಗೆ ವಿದ್ಯುತ್‌, ನೀರು ಮತ್ತು ಅಡುಗೆ ಅನಿಲ ಸಂಪರ್ಕವನ್ನು ಕಡಿತಗೊಳಿಸುವಂತೆ ಲೋಕಸಭಾ ಸದನ ಸಮಿತಿ ಮಂಗಳವಾರ ನಿರ್ದೇಶನ ನೀಡಿದೆ. ಅಲ್ಲದೆ ಮನೆ ತೆರವು ಮಾಡಲು ಪೊಲೀಸರ ನೆರವು ಕೋರಿದೆ.

ಬಿಜೆಪಿ ಸಂಸದ ಸಿ.ಆರ್‌.ಪಾಟೀಲ್‌ ಅಧ್ಯಕ್ಷತೆಯ ಸಮಿತಿಯು, ಮಾಜಿ ಸಂಸದರು ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸುವಂತೆ ಮಾಡಲು ಪೊಲೀಸರ ನೆರವು ಕೋರಲು ನಿರ್ಧರಿಸಿದೆ. ನಿಯಮಗಳ ಪ್ರಕಾರ ಸಂಸತ್‌ ವಿಸರ್ಜನೆಯಾದ ಒಂದು ತಿಂಗಳೊಳಗಾಗಿ ಬಂಗಲೆಗಳನ್ನು ಖಾಲಿ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT